News Karnataka Kannada
Monday, May 06 2024
ಬೀದರ್

ಬೀದರ್: ಬಿಜೆಪಿಯಿಂದ ಬೃಹತ್ ರೋಡ್‌ ಶೋ ನಾಳೆ

Bidar: BJP to hold massive roadshow tomorrow
Photo Credit : News Kannada

ಔರಾದ್‌: ವಿಜಯ ಸಂಕಲ್ಪ ರಥಯಾತ್ರೆ ಶನಿವಾರ ಪಟ್ಟಣಕ್ಕೆ ಆಗಮಿಸಲಿದ್ದು, ಬೃಹತ್ ರೋಡ್‌ ಶೋ ಯಶಸ್ವಿಗೆ ಎಲ್ಲ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಹೇಳಿದರು.

ಯಾತ್ರೆ ನಿಮಿತ್ತ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷ, ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ.

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಇತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು. ಕ್ಷೇತ್ರದ ವಡಗಾಂವ, ಸಂತಪುರ ಮತ್ತು ಪಟ್ಟಣದಲ್ಲಿ ರೋಡ್ ಶೋ ನಡೆದ ನಂತರ ಗಣ್ಯರು ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು.

ರೋಡ್ ಶೋನಲ್ಲಿ ಕನಿಷ್ಠ 20 ಸಾವಿರಕ್ಕಿಂತ ಹೆಚ್ಚು ಜನರನ್ನು ಸೇರಬೇಕು ಎಂದರು. ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮಾಜಿ ಶಾಸಕ ಅಮರನಾಥ ಪಾಟೀಲ್‌, ಚುನಾವಣಾ ಪ್ರಭಾರಿ ವೀರಣ್ಣಾ ಕಾರಬಾರಿ, ಯಾತ್ರೆ ಸಂಚಾಲಕ ವಸಂತ ವಕೀಲ್, ಸುರೇಶ ಭೋಸ್ಥೆ, ಮುಖಂಡರಾದ ಶರಣಪ್ಪ ಪಂಚಾಕ್ಷರಿ, ಧೋಂಡಿಬಾ ನರೋಟೆ, ಗಿರೀಶ ವಡೆಯ‌, ಖಂಡೋಬಾ ಕಂಗಟೆ ಇತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು