News Karnataka Kannada
Saturday, April 27 2024
ಬೀದರ್

ಓಡಿ ಹೋಗುವ ಗಿರಾಕಿಗಳಿಗೆ ಮನ್ನಣೆ ನೀಡಬೇಡಿ: ಶಾಸಕ ಬಂಡೆಪ್ಪ ಖಾಶೆಂಪುರ್

Don't give credit to customers who run away: MLA Bandeppa Khashempur
Photo Credit : News Kannada

ಬೀದರ್ (ಏ.30): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಓಡಿ ಹೋಗುವ ಗಿರಾಕಿಗಳಿಗೆ ಮನ್ನಣೆ ನೀಡಬೇಡಿ. ಸದಾ ನಿಮ್ಮ ಜೊತೆಗೆ ಇರುವ ನನ್ನನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿ ಎಂದು ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂದಕನಳ್ಳಿ, ಕಂಗನಕೋಟ್, ಶಮಶೀರನಗರ ನಗರ, ಬಾವಗಿ, ನೆಲವಾಳ, ಸಂಗೊಳಗಿ, ಸಂಗೊಳಗಿ ಎ,ಬಿ,ಸಿ,ಡಿ ತಾಂಡಗಳು ಸೇರಿದಂತೆ ಅನೇಕ ಗ್ರಾಮ ಮತ್ತು ತಾಂಡಗಳಲ್ಲಿ ಶನಿವಾರ ಮತಯಾಚನೆ ನಡೆಸಿ ಮಾತನಾಡಿದ ಅವರು, ನಾನು ಸದಾಕಾಲವೂ ನಿಮ್ಮೊಂದಿಗೆ ಇರುವವನಾಗಿದ್ದೇನೆ. ಯಾವ ಸಮಯದಲ್ಲಿ ಬಂದರು ಸಿಗುವವನಾಗಿದ್ದೇನೆ ಎಂದರು.

ಕೆಲವು ಗಿರಾಕಿಗಳು ಎಲೆಕ್ಷನ್ ಸಲುವಾಗಿ ಬಂದು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾರೆ. ಅವರೆಲ್ಲ ಜೇಬಿನಲ್ಲಿ ಪಾಸ್ಪೋರ್ಟ್ ಇಟ್ಕೊಂಡು ಓಡಾಡುತ್ತಾರೆ. ಯಾವಾಗ ಎಲ್ಲಿಗೆ ಹಾರುತ್ತಾರೆ ಅಂತ ಗೋತ್ತಾಗಲ್ಲ. ಏನೋ ಆಸೆಯಿಂದ ಓಡಾಡ್ತಿದ್ದಾರೆ. ನಮ್ಮ ಕ್ಷೇತ್ರದ ಜನರು ಅವರಿಗೆ ತಕ್ಕಪಾಠ ಕಲಿಸಬೇಕು. ಸದಾ ನಿಮ್ಮ ಜೊತೆಗೆ ಇರುವ ನನಗೆ ಮತ ನೀಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಮತಯಾಚನೆಯ ನಡುವೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ವಿವಿಧ ಗ್ರಾಮಗಳ ಮಂದಿರ, ಮಸೀದಿ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು.

ಚುನಾವಣಾ ಪ್ರಚಾರದ ವೇಳೆಯಲ್ಲಿಯೇ ಸಂಗೊಳಗಿ ಗ್ರಾಮದಲ್ಲಿ ಬೇಮಳಖೇಡ ಗ್ರಾಮದ ವಿವಿಧ ಪಕ್ಷಗಳ ಪ್ರಮುಖರನ್ನು ಹಾಗೂ ವಿವಿಧ ಗ್ರಾಮಗಳಲ್ಲಿ ಅನೇಕರನ್ನು ಜೆಡಿಎಸ್ ಪಕ್ಷದ ಶಾಲು ಹೊದಿಸಿ, ಧ್ವಜ ನೀಡುವ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ರಾಜ್ಯ, ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಘಟಕಗಳ ಮುಖಂಡರು, ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಅನೇಕರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು