News Karnataka Kannada
Thursday, May 09 2024
ಮನರಂಜನೆ

ಬೀದರ್: ಬಸವ ಉತ್ಸವದಲ್ಲಿ ಜರುಗಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು

Bidar: Various cultural programmes held at Basava Utsava
Photo Credit : News Kannada

ಬೀದರ್, ಮಾ.13: ಬಸವ ಉತ್ಸವ-2023ರ ಅಂಗವಾಗಿ ಬಸವಕಲ್ಯಾಣದ ಥೇರ ಮೈದಾನದ ಮುಖ್ಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಚನ ಗಾಯನ, ಬಸವಣ್ಣನವರ ವಚನ ನೃತ್ಯ, ಶಾಸ್ತ್ರಿಯ ಸಂಗೀತ, ಬಸವಣ್ಣನವರ ವಚನ, ಜಾನಪದ ಗೀತೆ, ವಚನ ಗಾಯನ ಕಾರ್ಯಕ್ರಮಗಳು ಜರುಗಿದರು.

ಮಹಾಲಕ್ಷ್ಮೀ  ಮತ್ತು ತಂಡ ರಾಯಚೂರು ಇವರಿಂದ ವಚನ ಗಾಯನವು ಸುಮಧುರವಾಗಿ ಮೂಡಿಬಂದಿತು. ನಿವೃತ್ತ ವಾರ್ತಾಧಿಕಾರಿ ಚಂದ್ರಕಾಂತ ಅವರು ಬಸವಣ್ಣನವರ ವಚನಗಳ ಕುರಿತು ತ್ರಿಭಾಷಾ ಗಾಯನ ನಡೆಸಿಕೊಟ್ಟರು.

ಗುರುಶಾಂತಯ್ಯ ಸ್ಥಾವರಮಠ ಮತ್ತು ಸಂಗಡಿಗರಿಂದ ವಚನ ಗಾಯನ ನಡೆಯಿತು. ಬಸವರಾಜ ಬಂಟನೂರ ಯಾದಗಿರಿ ಮತ್ತು ತಂಡದವರಿಂದ ವಚನ ಗಾಯನ ಹಾಗೂ ಶಿವಕುಮಾರ ಪಾಂಚಾಳ ಬೀದರ ಇವರ ವಚನ ಗಾಯನವು ಸುಮಧುರವಾಗಿ ನಡೆಯಿತು.

ಅನನ್ಯ ಭಟ್ಟ ಮತ್ತು ಚೇತನ ನಾಯರ ಸಂಗೀತ ಜೋಡಿ ಬಸವಕಲ್ಯಾಣದ ಜನತೆಗೆ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಸಂಗೀತದ ಮೋಡಿ ಮಾಡಿದರು. ಅನನ್ಯ ಭಟ್ಟ ಅವರು ಹಾಡಿದ ಧೀರಾದಿ ಧೀರ ಧೀರ, ಶಿವ ಶಿವ ಹರ ಹರನು, ತಂದಾನೋ ತಾನಿ ತಂದಾನೋ, ಸಿದ್ದಯ್ಯ ಸ್ವಾಮಿ ಮತ್ತು ಚೇತನ ನಾಯರ ಅವರು ಹಾಡಿದ ಟಗರು ಬಂತು ಟಗರು, ಸಿಂಗಾರ ಸಿರಿಯೇ, ಮಹಾದೇವ ಈ ಹಾಡುಗಳ ಮೂಲಕ ಜನರನ್ನು ಮಂತ್ರಮುಗ್ಧರನ್ನಾಗಿಸಿದರು.

ಹಿಂದಿ ಸಂಗೀತ ಹಾಡುಗಾರರಾದ ಷಣ್ಮೂಖ ಪ್ರೀಯಾ ಮತ್ತು ನಿಹಾಲ್ ತೌರ್ ಅವರಿಂದ ವಿವಿಧ ಹಿಂದಿ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಹೀಗೆ ಹಲವಾರು ಕಲಾವಿದರು ಬಸವಕಲ್ಯಾಣದ ಜನತೆಗೆ ಸಂಗೀತದ ರಸದೌತಣವನ್ನು ಉಣಬಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು