News Karnataka Kannada
Wednesday, May 08 2024
ಬೀದರ್

ಔರಾದ ಅಭಿವೃದ್ಧಿಯೇ ಪರಮ ಸಂಕಲ್ಪ: ಪ್ರಭು ಚವ್ಹಾಣ

Development of Aurad is the ultimate resolve: Prabhu Chavan
Photo Credit : News Kannada

ಔರಾದ: ಮಹಾಜನತೆಯ ಆಶೀರ್ವಾದದಿಂದಾಗಿ ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜುಗಳ ನಿರ್ಮಾಣದಂತಹ ನಾನಾ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಅಭಿವೃದ್ಧಿಯೇ ನನ್ನ ಪರಮ ಸಂಕಲ್ಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಪ್ರಭು.ಬಿ ಚವ್ಹಾಣ ಹೇಳಿದರು.

ತಾಲ್ಲೂಕಿನ ವಡಗಾಂವ ಹಾಗೂ ಚಿಂತಾಕಿ ಗ್ರಾಮಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ ಅವರು,
ಮಹಾಜನತೆ ನನಗೆ ಕೆಲಸ ಮಾಡುವ ಉದ್ದೇಶದಿಂದ ಆಯ್ಕೆ ಮಾಡಿದ್ದಾರೆ. ಹಾಗಾಗಿ ಬೇರೆ ವಿಷಯಗಳ ಬಗ್ಗೆ ಚಿಂತಿಸದೇ ಕೇವಲ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಇಂದು ಎಲ್ಲ ಕಡೆಗಳಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ನಾನೆಂದು ಶಾಸಕನೆಂದು ಭಾವಿಸದೇ ಕೇವಲ ಜನ ಸೇವಕನೆಂದು ಭಾವಿಸಿ ಕೆಲಸ ಮಾಡುತ್ತಿದ್ದೇನೆ. ಜನತೆಯನ್ನು ನನ್ನ ಕುಟುಂಬದ ಸದಸ್ಯರಂತೆ ಭಾವಿಸಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೂ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಾ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಇದಾವುದೂ ಕೆಲಸ ಮಾಡುವುದಿಲ್ಲ. ಜನತೆಯೇ‌ ನನಗೆ ಸರ್ವಸ್ವ. ಅವರ ಆಶೀರ್ವಾದವೇ ನನಗೆ ಮಹಾಶಕ್ತಿ ಎಂದರು.

ಮುಂದಿನ ದಿನಗಳಲ್ಲಿ ಸಮಗ್ರ ಔರಾದ ಅಭಿವೃದ್ಧಿಗಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಯೋಜನೆ ರೂಪಿಸಿಕೊಂಡಿದ್ದೇನೆ. ಔರಾದ ಮಹಾಜನತೆ ಹಿಂದೆಂದಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕೋರಿದರು.

ಚಿಂತಾಕಿಯಲ್ಲಿ ಮಾಜಿ ಶಾಸಕರಾದ ಗುಂಡಪ್ಪ ವಕೀಲ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೆಂಗಳೂರಿನ ನಿವಾಸಿಯಾಗಿದ್ದು ಚುನಾವಣೆಗೆ ಮಾತ್ರ ಬಂದಿದ್ದಾರೆ. ಚುನಾವಣೆ ನಂತರ ಮತ್ತೆ ಬೆಂಗಳೂರಿಗೆ ಹೋಗುತ್ತಾರೆ. ಹಾಗಾಗಿ ಓಡಿಹೋಗುವ ವ್ಯಕ್ತಿಗೆ ಗೆಲ್ಲಿಸದೇ ಸದಾ ಕ್ಷೇತ್ರದಲ್ಲಿ ಲಭ್ಯವಿರುವ ಪ್ರಭು.ಬಿ ಚವ್ಹಾಣ ಅವರನ್ನು ಗೆಲ್ಲಿಸೋಣ ಎಂದು ತಿಳಿಸಿದರು.

ಹಿರಿಯ ಮುಖಂಡರಾದ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಪ್ರಭು ಚವ್ಹಾಣ ಸಾಮಾನ್ಯ ವ್ಯಕ್ತಿಯಲ್ಲ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಗ್ರಾಮ ಸಂಚಾರ ನಡೆಸುವ ಅಪರೂಪದ ರಾಜಕಾರಣಿ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಗೌರವಿಸುವ ಶಿಕ್ಷಣ ಪ್ರೇಮಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ಗೋಪ್ರೇಮಿ, ಸಾಹಿತಿಗಳು ಮತ್ತು ಕಲಾವಿದರ ಮನೆಗೆ ಹೋಗಿ ಸನ್ಮಾನಿಸುವ ಏಕೈಕ ನಾಯಕ. ಇವರು ಔರಾದಗೆ ಮಾತ್ರ ಸೀಮಿತವಾಗದೇ ಎಲ್ಲ ಕ್ಷೇತ್ರಗಳ ನಾಯಕರಾಗಿದ್ದಾರೆ. ಅಂತಹ ನಾಯಕನನ್ನು ದಾಖಲೆ ಪ್ರಮಾಣದ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು.

ಔರಾದ ಕ್ಷೇತ್ರದಲ್ಲಿ ಪ್ರಭು ಚವ್ಹಾಣ ಅವರು ಶಾಸಕರಾದ ನಂತರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಔರಾದನಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಅನ್ಯ ಪಕ್ಷಗಳ ಪ್ರಭಾವ ಇಲ್ಲ. ಕೇವಲ ಬಿಜೆಪಿಯ ಅಲೆಯಿದೆ. ಕಾರ್ಯಕರ್ತರು ಯಾವುದೇ ಸಂಕೋಚವಿಲ್ಲದೇ ಬೂತ್ ಗಳನ್ನು ಜಯಿಸಲು ಶ್ರಮ ವಹಿಸಬೇಕು. ದಾಖಲೆ ಪ್ರಮಾಣದ ಮತಗಳ ಅಂತರದಿಂದ ಗೆಲ್ಲಿಸಲು ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಗ್ರಾಮಗಳಲ್ಲಿ ಭರ್ಜರಿ ಸ್ವಾಗತ:
ಚಿಂತಾಕಿ ಹಾಗೂ ವಡಗಾಂವ ಗ್ರಾಮಗಳಿಗೆ ಸಚಿವ ಪ್ರಭು ಚವ್ಹಾಣ ಅವರಿಗೆ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದರು. ಗ್ರಾಮದ ಮುಖ್ಯರಸ್ತೆಯಿಂದ ವೇದಿಕೆವರೆಗೆ ಮೆರವಣಿಗೆ ಮೂಲಕ ತೆರಳಿ ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅಮೃತರಾವ ಪಾರಾ, ಸಿ.ಹೆಚ್ ಲಕ್ಷ್ಮಣರೆಡ್ಡಿ, ಜೀವನಸಿಂಗ್, ಮಹಾರಾಷ್ಟ್ರದ ಶಂಕರರಾವ ರಾಠೋಡ್ಡಿ, ರಾಮರೆಡ್ಡಿ ಪಾಟೀಲ, ಶಿವರಾಜ ಅಲ್ಮಾಜೆ, ನರಸಿಂಗ್ ಮೇತ್ರೆ, ರಮೇಶ ವಾಗ್ಮಾರೆ, ರವೀಂದ್ರ ರೆಡ್ಡಿ, ಎಂ.ಡಿ ಸಲಾವುದ್ದಿನ್, ಪ್ರಕಾಶ ಅಲ್ಮಾಜೆ, ಘಾಳ ರೆಡ್ಡಿ, ಮೃತ್ಯುಂಜಯ ಅನೀಲ ಗುಂಡಪ್ಪ, ಖಾಜಾಮಿಯಾ, ಸಂಜಯ ಮಾನಕರೆ, ಪ್ರಕಾಶ ಮೇತ್ರೆ, ಖಂಡೋಬಾ ಕಂಗಟೆ, ಸೋಮನಾಥ, ಮಲ್ಲಪ್ಪ ನೇಳಗೆ, ಸಂಜು ಚವ್ಹಾಣ, ನಾಗಶೆಟ್ಡಿ ಗಾದಗೆ ಹಾಗೂ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು