ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪೂರ (ಸಿ) ಗ್ರಾಮಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಅಶೋಕ ಖೇಣಿ ರವರು ಭೇಟಿ ನೀಡಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದರು.
ಬಳಿಕ ಮಾತನಾಡಿದ ಮಾನ್ಯ ಅಶೋಕ ಖೇಣಿ ರವರು ಮಾತಾನಾಡಿ ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೇನೆ ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸಮಾನಾಗಿ ನೋಡುವ ಪಕ್ಷ ಬರುವ ಚುನಾವಣೆಯಲ್ಲಿ ಅಭಿವೃದ್ಧಿ ಗೊಸ್ಕರ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಚಂದ್ರಶೇಖರ್ ಚನಶಟ್ಟಿ, ಕರೀಮ ಸಾಬ ಕಮಠಾಣ, ಯತ್ ಕಾಂಗ್ರೆಸ ಅಧ್ಯಕ್ಷರಾದ ಅಜ್ಮತ್ ಅಲ್ಲೂರಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ರಮೇಶ ಚಟನಳ್ಳಿ, ಸದಸ್ಯರಾದ ಸುಲ್ತಾನ ಪಟೇಲ್, ನೀಲಕಂಠ ಸ್ವಾಮಿ, ಮುಖಂಡರಾದ ತಾಹೇರ ಅಲಿ, ಉಮರ ಅಲಿ, ಮೋಸಿನ ಪಟೇಲ್ ವಿಶ್ವನಾಥ್, ಪೀರ ಮಹ್ಮದ್, ದಾವುಲ್ ಪಟೇಲ್, ನರಸಿಂಗ, ಶರಣಪ್ಪಾ, ವಾಹೇದ ಅಲಿ, ಪಾಶಾ ಮಿಯ್ಯಾ ಸೇರಿ ಅನೇಕರು ಉಪಸ್ಥಿತರಿದ್ದರು.