News Karnataka Kannada
Sunday, May 12 2024
ಬೀದರ್

ಬೀದರ್‌: ಸಾಂಸ್ಕೃತಿಕ ಭವನಕ್ಕೆ 5 ಎಕರೆ ಜಾಗಕ್ಕೆ ಕ್ಷತ್ರಿಯ ಸಮಾಜ ಆಗ್ರಹ

New Project (32)
Photo Credit : News Kannada

ಬೀದರ್: ತಾಲ್ಲೂಕಿನ ಸೋಮವಂಶಿ ಆರ್ಯ ಕ್ಷತ್ರಿಯ ಸಮಾಜದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗ ನೀಡಬೇಕೆಂದು ಸಮಾಜದವರು ಆಗ್ರಹಿಸಿದರು.

ಈ ಸಂಬಂಧ ಸಮಾಜದ ಮುಖಂಡರು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಸಮಾಜವು ನಗರದಲ್ಲಿ ಭವಾನಿ ಮಾತಾ ಮಂದಿರ ಹೊಂದಿದೆ. ಮಂದಿರದಲ್ಲಿ ಪೂಜೆ ಪುನಸ್ಕಾರ, ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಆದರೆ, ಮಂದಿರದ ಜಾಗ ಸಾಕಾಗುತ್ತಿಲ್ಲ. ಸ್ಥಳಾವಕಾಶದ ಕೊರತೆ ಇದೆ. ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಐದು ಎಕರೆ ಜಾಗ ನೀಡಬೇಕು. ಅಲ್ಲಿ ಸಮಾಜದ ಬಡವರಿಗಾಗಿ ವಸತಿ ನಿಲಯ ಸೇರಿದಂತೆ ಇನ್ನಿತರೆ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಮುಖಂಡರಾದ ನಾಗನಾಥ ನಾಗರೆ, ಮುಖೇಶರಾವ್ ನಂದಗೌಳಿ, ಪ್ರಕಾಶ್ ರಾವ್, ಭರತ ರಾವ , ರತನ ರಾವ್, ರಾಜು ಘವಾರಕರ್, ವಿನೋದ ಕುಮಾರ್, ನಾಗರಾಜ್, ಬಿಜೆಪಿ ಕಲಬುರಗಿ ವಿಭಾಗದ ಪ್ರಭಾರಿ ಈಶ್ವರ ಸಿಂಗ್‌ ಠಾಕೂರ್‌ ಮತ್ತಿತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು