ಬೀದರ್: ತಾಲ್ಲೂಕಿನ ಸೋಮವಂಶಿ ಆರ್ಯ ಕ್ಷತ್ರಿಯ ಸಮಾಜದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗ ನೀಡಬೇಕೆಂದು ಸಮಾಜದವರು ಆಗ್ರಹಿಸಿದರು.
ಈ ಸಂಬಂಧ ಸಮಾಜದ ಮುಖಂಡರು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಸಮಾಜವು ನಗರದಲ್ಲಿ ಭವಾನಿ ಮಾತಾ ಮಂದಿರ ಹೊಂದಿದೆ. ಮಂದಿರದಲ್ಲಿ ಪೂಜೆ ಪುನಸ್ಕಾರ, ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಆದರೆ, ಮಂದಿರದ ಜಾಗ ಸಾಕಾಗುತ್ತಿಲ್ಲ. ಸ್ಥಳಾವಕಾಶದ ಕೊರತೆ ಇದೆ. ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ಐದು ಎಕರೆ ಜಾಗ ನೀಡಬೇಕು. ಅಲ್ಲಿ ಸಮಾಜದ ಬಡವರಿಗಾಗಿ ವಸತಿ ನಿಲಯ ಸೇರಿದಂತೆ ಇನ್ನಿತರೆ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಮುಖಂಡರಾದ ನಾಗನಾಥ ನಾಗರೆ, ಮುಖೇಶರಾವ್ ನಂದಗೌಳಿ, ಪ್ರಕಾಶ್ ರಾವ್, ಭರತ ರಾವ , ರತನ ರಾವ್, ರಾಜು ಘವಾರಕರ್, ವಿನೋದ ಕುಮಾರ್, ನಾಗರಾಜ್, ಬಿಜೆಪಿ ಕಲಬುರಗಿ ವಿಭಾಗದ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಮತ್ತಿತರು ಹಾಜರಿದ್ದರು.