ಬೀದರ್: ನಗರದಲ್ಲಿ ರಿಂಗ್ರೋಡ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ವಾಹನ ಚಾಲಕರು ಸಂಪರ್ಕ ರಸ್ತೆಗಾಗಿ ಹುಡುಕಾಡುತ್ತ ಸಂಚರಿಸಬೇಕಾದ ಪರಿಸ್ಥಿತಿ ಇದೆ.
ದೇವ ದೇವ ವನದಿಂದ ಚಿಕಪೇಟ್ ಮೂಲಕ ಅಲಿಯಾಬಾದ್ ವರೆಗೆ, ಕೊಳಾರ (ಕೆ) ಕೈಗಾರಿಕೆ ಪ್ರದೇಶದಿಂದ ಬೆಳ್ಳೂರಾ ಕ್ರಾಸ್ ವರೆಗೆ, ಚಿದ್ರಿ ಕ್ರಾಸ್ನಿಂದ ಶಹಾಪುರ ಗೇಟ್ ವರೆಗೆ ರಿಂಗ್ರೋಡ್ ಪೂರ್ಣಗೊಂಡಿದೆ.
ವರ್ತುಲ ರಸ್ತೆಯೆಂದರೆ ಅದು ‘ರಿಂಗ್’ ಆಕಾರದಲ್ಲಿ ಇರಬೇಕು. ಆದರೆ, ಬೀದರ್ ನಗರದಲ್ಲಿ ‘ರಿಂಗ್’ ಪೂರ್ಣಗೊಂಡಿಲ್ಲ.
ಅಲಿಯಾಬಾದ್ನಿಂದ ಕೊಳಾರ (ಕೆ) ವರೆಗೆ ರಿಂಗ್ರೋಡ್ ರಸ್ತೆ ಮುಂದುವರೆಯುವುದಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಕೂಡಿಕೊಂಡು ಅಲ್ಲಿಂದ ಕೊಳಾರ ತಲುಪಿ, ಬೆಳ್ಳೂರಾ ಕ್ರಾಸ್ ವರೆಗೆ ಹೋಗಬೇಕು. ಪುನಃ ಅಲ್ಲೂ ರಿಂಗ್ರೋಡ್ ಸಂಪರ್ಕ ಇಲ್ಲ. ಚಿದ್ರಿ ಕ್ರಾಸ್ ವರೆಗೆ ಬರಬೇಕು. ಇನ್ನು, ಚಿದ್ರಿ ಕ್ರಾಸ್ನಿಂದ ಶಹಾಪುರ ಗೇಟ್ ವರೆಗೆ ಕೂಡುವ ವರ್ತುಲ ರಸ್ತೆ ಬೀದರ್-ಹೈದರಾಬಾದ್ ಅಂತರರಾಜ್ಯ ಹೆದ್ದಾರಿ ಸೇರುತ್ತದೆ. ಔರಾದ್ ಕಡೆಗೆ ಹೋಗಬೇಕಾದವರು ಪುನಃ ಅಲ್ಲೂ ರಿಂಗ್ರೋಡಿಗೆ ಹುಡುಕಾಟ ನಡೆಸಬೇಕು.
ಇನ್ನು, ಹಳೆ ಆರ್ಟಿಒ ಕಚೇರಿಯಿಂದ ಚಿದ್ರಿ ಕ್ರಾಸ್ ವರೆಗೆ ರಿಂಗ್ರೋಡ್ ಕೂಡು ರಸ್ತೆ ನಿರ್ಮಿಸಲಾಗಿದೆ. ಆದರೆ, ಈ ಮಾರ್ಗ ಬಹಳ ಕಿರಿದಾಗಿದೆ. ಅದರಲ್ಲೂ ಏರ್ಫೋರ್ಸ್ ಕ್ಯಾಂಟೀನ್ ಪ್ರವೇಶ ದ್ವಾರದ ಬಳಿಯಿರುವ ರೈಲ್ವೆ ಅಂಡರ್ಪಾಸ್ ಅಪಘಾತ ವಲಯವಾಗಿ ಬದಲಾಗಿದೆ. ಶಿವನಗರ, ಪ್ರತಾಪ ನಗರ ಹಾಗೂ ಮೈಲೂರ, ಗುಂಪಾ, ಚಿದ್ರಿಗೆ ಈ ರಸ್ತೆ ಸಂಪರ್ಕ ಸೇತುವೆಯಾಗಿದೆ.