ಗುಂಡ್ಲುಪೇಟೆ: ತಾ| ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗಿದ್ದು, ಬಂಡೀಪುರ ವ್ಯಾಪ್ತಿಯಲ್ಲಿನ ಕೆರೆ ಕಟ್ಟೆಗಳಲ್ಲಿ ಮಳೆಯ ನೀರು ಸಂಗ್ರಹವಾಗಿದ್ದು ಪ್ರಾಣಿಗಳ ನೀರಿನ ದಾಹ ನೀಗಿದಂತ್ತಾಗಿದೆ.
ಒಂದೆಡೆ ಗಜಪಡೆಯೊಂದು ಕೆರೆಯೊಂದಕ್ಕೆ ಬಂದು ಜಲ ಕ್ರೀಡೆಯಲ್ಲಿ ಭಾಗಿಯಾಗಿದ್ದಲ್ಲದೆ, ಬಾಯಾರಿಕೆ ನೀಗಿಸಿಕೊಂಡು ಸಂತಸದಿಂದ ಇರುವ ದೃಶ್ಯ ಸಫಾರಿಗೆ ತೆರಳಿದ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಹುಲಿಯೊಂದು ಕೆರೆಗೆ ಬಂದು ನೀರು ಕುಡಿದುಕೊಂಡು ಕಾಡಿನೊಳಗೆ ತೆರಳುವ ರಾಜಗಂಭೀರ್ಯ ನಡೆಯ ದೃಶ್ಯವನ್ನುಪ್ರವಾಸಿಗರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಅದೀಗ ಸಖತ್ ವೈರಲ್ ಆಗಿದೆ.
Ad