News Karnataka Kannada
Saturday, May 04 2024
ತುಮಕೂರು

ಬಾಜಿ ಕಟ್ಟಿ ಗುಬ್ಬಿಯ ನಿಟ್ಟೂರುಪುರ ಐತಿಹಾಸಿಕ ತೇರಿಗೆ ಬೆಂಕಿ ಇಟ್ಟ ಪಾಪಿಯ ಬಂಧನ

Fire
Photo Credit : News Kannada

ತುಮಕೂರು: ಗುಬ್ಬಿ ತಾಲೂಕಿನ ನಿಟ್ಟೂರುಪುರ ಗ್ರಾಮದ ಐತಿಹಾಸಿಕ ಶ್ರೀ ಕಲ್ಲೇಶ್ವರ ಸ್ವಾಮಿ ಅವರ ರಥಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವಂತಹ ಘಟನೆ ನಡೆದಿದೆ.

ಸುಮಾರು 800 ವರ್ಷಗಳ ಇತಿಹಾಸ ಇರುವಂತಹ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತಾದಿಗಳು ಲಕ್ಷಾಂತರ ರು. ಖರ್ಚು ಮಾಡಿ ವಿಶೇಷ ರಥ ಸಿದ್ಧಪಡಿಸಿದ್ದರು. ಶ್ರೀ ಕಲ್ಲೇಶ್ವರ ಸ್ವಾಮಿಯ ಅನ್ನಪೂರ್ಣೇಶ್ವರಿ ರಥೋತ್ಸವಕ್ಕೆ ಕೇವಲ ಹತ್ತು ದಿನಗಳ ಬಾಕಿಯಿದೆ. ಸೋಮವಾರ ಮಧ್ಯಾಹ್ನ ವೇಳೆ ಕಿಡಿಗೇಡಿ ಒಬ್ಬ ಬಾಜಿ ಕಟ್ಟಿ ಬೆಂಕಿ ಇಟ್ಟಿದ್ದಾನೆ.

ಕನ್ನಡ ಮಾತನಾಡದ ಬಿಹಾರಿ ಮೂಲದ ವ್ಯಕ್ತಿ ತೇರಿಗೆ ಬೆಂಕಿ ಇಟ್ಟಿದ್ದಾನೆ ಎಂಬ ಮಾಹಿತಿ ಇದ್ದು ಸ್ಥಳದಲ್ಲಿಯೇ ಸಿಕ್ಕಿದ್ದಾನೆ. ಕೂಡಲೇ ಅವನನ್ನು ಗುಬ್ಬಿ ಆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ನಾಡ ಕಚೇರಿಯ ತಹಸೀಲ್ದಾರ್ ಉಪ ತಹಸೀಲ್ದಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಇನ್ನು ಹತ್ತು ದಿನಗಳಲ್ಲಿ ಜಾತ್ರೆ ಇದ್ದು, ಸಿದ್ದಲಿಂಗೇಶ್ವರರ ತೇರಿನಲ್ಲಿಯೇ ಕಲ್ಲೇಶ್ವರ ಸ್ವಾಮಿಯ ತೇರನ್ನು ಎಳೆಯುತ್ತೇವೆ. ಸರ್ಕಾರ ಕೂಡಲೇ ಅನುದಾನ ನೀಡಿ, ಮುಂದಿನ ವರ್ಷದ ಒಳಗೆ ತೇರು ತಯಾರಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು