News Karnataka Kannada
Sunday, May 05 2024
ತುಮಕೂರು

ನಾಲ್ವರು ಮಾಜಿ ನಕ್ಸಲೀಯರನ್ನ​ ​ವಶಕ್ಕೆ ಪಡೆದ ಪಾವಗಡ ಪೊಲೀಸ್

2005ರ ಪಾವಗಡ ವೆಂಕಟಮ್ಮನಹಳ್ಳಿ ಬ್ಲಾಸ್ಟ್ ಕೇಸ್​ಗೆ ಸಂಬಂಧಿಸಿದಂತೆ ನಾಲ್ವರು ಮಾಜಿ ನಕ್ಸಲೀಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Photo Credit : News Kannada

ತುಮಕೂರು: 2005ರ ಪಾವಗಡ ವೆಂಕಟಮ್ಮನಹಳ್ಳಿ ಬ್ಲಾಸ್ಟ್ ಕೇಸ್​ಗೆ ಸಂಬಂಧಿಸಿದಂತೆ ನಾಲ್ವರು ಮಾಜಿ ನಕ್ಸಲೀಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪಾವಗಡ ತಾಲೂಕಿನ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಆದರೆ ಕೋರ್ಟ್​ ವಿಚಾರಣೆಗೆ ನೋಟಿಸ್​ ನೀಡಿದ್ದರೂ ಪದೇ ಪದೇ ತನಿಖೆಗೆ ಗೈರಾಗುತ್ತಿದ್ದರು. ಕೋರ್ಟ್ ಸೂಚನೆ ಮೇರೆಗೆ 4 ಮಾವೋವಾದಿಗಳನ್ನು ಆಂಧ್ರ ಪ್ರದೇಶದ ವಿವಿಧ ಭಾಗದಲ್ಲಿ ಪತ್ತೆ ಹಚ್ಚಿ ಪಾವಗಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 2005ರಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಇದೇ ಕೇಸ್​ಗೆ ಸಂಬಂಧಿಸಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.‌ ಹೀಗಾಗಿ ನಾಲ್ಕು ಜನರನ್ನು ಮತ್ತೆ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

2005ರಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಯಾದ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಮತ್ತು ತಿರುಮಣಿಯಲ್ಲಿ ನಕ್ಸಲ್​ರ ಹಾವಳಿ ಹೆಚ್ಚಾದ ಹಿನ್ನೆಲ್ಲೆಯಲ್ಲಿ ವೆಂಕಟಮ್ಮನಹಳ್ಳಿಯಲ್ಲಿ 30 ಜನರ ಕೆಎಸ್​ಆರ್​ಪಿ ತುಕುಡಿಯನ್ನು ನಿಯೋಜಿಸಲಾಗಿತ್ತು. 2005ರ ಸೆಪ್ಟೆಂಬರ್​ 10ರ ರಾತ್ರಿ 10:30ರ ಸುಮಾರಿಗೆ 300 ಜನ ನಕ್ಸಲ್​​ರು ಕೆಎಸ್​ಆರ್ಪಿ ತುಕುಡಿ ಮೇಲೆ ದಾಳಿ ಮಾಡಿದ್ದರು. ಮಾತ್ರವಲ್ಲದೇ ಪೊಲೀಸ್​ ಅಧಿಕಾರಿಯ ಎದೆಗೆ ನಕ್ಸಲ್​ರು ಗುಂಡು ಹಾರಿಸಿದರು. ಪೊಲೀಸರು ತಂಗಿದ್ದ ಶಾಲೆಯ ಮೇಲೆ ಗ್ರೆನೆಡ್​ ಬಾಂಬ್​ ದಾಳಿ ಮಾಡಿದರು. ಈ ವೇಳೆ ಕೂಡ ಹಲವು ಅಧಿಕಾರಿಗಳು ಪ್ರಾಣ ಬಿಟ್ಟಿದ್ದರು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು