ಹರಿಯಾಣ: ಇದೀಗ ಪ್ರಸ್ತುತ ಹರಿಯಾಣ ಮುಖ್ಯಮಂತ್ರಿಯಾಗಿರು ಮನೋಹರ್ ಲಾಲ್ ಖಟ್ಟರ್ ಅವರು ರಾಜಿನಾಮೆ ನೀಡಲು ನಿರ್ಧರಿಸಿರುದಾಗಿ ವರದಿ ಕೇಳಿ ಬಂದಿದೆ. ಹಾಗೂ ಇವರು ಈ ಬಾರಿ ಕರ್ನಾಲ್ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಮೂಲ ತಿಳಿಸಿದೆ.
ತರುಣ್ ಚುಗ್ ಮತ್ತು ಅರ್ಜುನ್ ಮುಂಡಾ ಅವರೊಂದಿಗೆ ಮಾತನಾಡಲಿದ್ದಾರೆ.ಹಾಗೂ ವರದಿ ಪ್ರಕಾರ ಮುಂದಿನ ದಿನಗಳಲ್ಲಿ ನಯಾಬ್ ಸೈನಿ ಮತ್ತು ಸಂಜಯ್ ಭಾಟಿಯಾ ಅವರು ಸಿಎಂ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಮೂಲ ತಿಳಿಸಿದೆ. ಇಂದು ಖಟ್ಟಾರ್ ಸಚಿವ ಸಂಪುಟ ಸಾಮೂಹಿಕ ರಾಜಿನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿ ನೀಡಲಾಗಿದೆ.
ಮನೋಹರ್ ಲಾಲ್ ಖಟ್ಟರ್ವರು ಇಂದು ಬಿಜೆಪಿ ಶಾಸಕರನ್ನು ತಮ್ಮ ಹರಿಯಾಣ ನಿವಾಸಕ್ಕೆ ಬೆಳಗ್ಗೆ11 ಗಂಟೆಗೆ ಸಭೆ ಕರೆದಿದ್ದು ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.