News Karnataka Kannada
Sunday, May 19 2024
ತುಮಕೂರು

ಮಾಜಿ ಸಚಿವ ಪರಮೇಶ್ವರ್ ಅಳಿಯ ಎಂದು ಹೇಳಿಕೊಂಡು ಜನರಿಗೆ ವಂಚನೆ

Photo Credit :

ತುಮಕೂರು,ಏ.16 : ಪ್ರಕರಣವೊಂದರಲ್ಲಿ ನ್ಯಾಯ ಕೊಡಿಸದೆ ಕಿರುಕುಳ ನೀಡುತ್ತಿದ್ದಾರೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್ ವಾಡ್ ಅವರ ವಿರುದ್ಧ ದೂರಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಿಕಾಂತ್ ಅಲಿಯಾಸ್ ಚಂದು ಎಂಬಾತ ತಾನು ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಅಳಿಯ ಎಂದು ಹೇಳಿಕೊಂಡು ಪೊಲೀಸರಿಗೆ ವರ್ಗಾವಣೆ ಮಾಡಿ ಕೊಡುತ್ತೇನೆ ಎಂದು ನಂಬಿಸಿ ವಂಚಿಸುವುದೇ ಇವನ ದಂಧೆಯಾಗಿತ್ತು.

ಯಾರದ್ದೋ ಜಮೀನಿಗೆ ನಕಲಿ ವಾರಸುದಾರರನ್ನು ಸೃಷ್ಟಿಸಿ, ಇನ್ಯಾರಿಗೋ ಜಮೀನು ಮಾರಾಟ ಮಾಡಿ ಹಣ ಪಡೆದಿದ್ದಾನೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು, ಹಾಗೇ ನಕಲಿ ವಾರಸುದಾರರನ್ನು ಬಂಸಲಾಗಿತ್ತು, ನಿರೀಕ್ಷಣಾ ಜಾಮೀನಿನ ಮೇಲೆ ಹೊರ ಬಂದು ಕೆಲ ದಿನಗಳ ಕಾಲ ಲಕ್ಷ್ಮಿಕಾಂತ್ ತಲೆ ಮರೆಸಿಕೊಂಡಿದ್ದ.

ಇಷ್ಟೇ ಅಲ್ಲದೆ ಸುಮಿಯಬಾನು ಎಂಬ ಮಹಿಳೆ ಪರಿಚಯಿಸಿಕೊಂಡು ಸಹಾಯ ಮಾಡುವ ನೆಪದಲ್ಲಿ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಆಕೆಯನ್ನು ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಆಗಸ್ಟ್ 4, 2021 ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಸ್ವಲ್ಪ ದಿನಗಳ ನಂತರ ಇದೇ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ, ಏಪ್ರಿಲ್ 13, 2022 ರಂದು ಈತನ ವಿರುದ್ಧ ಮತ್ತೆ ಕೇಸ್ ದಾಖಲಾಯಿತು, ಪ್ರಕರಣ ದಾಖಲಾದ ನಂತರ ತುಮಕೂರು ಎಸ್‍ಪಿ ಸೇರಿದಂತೆ ಇತರರ ವಿರುದ್ಧ ವಿಡಿಯೋ ಹೇಳಿಕೆ ಹರಿಬಿಡುವ ಮೂಲಕ ಇಡೀ ಜಿಲ್ಲಾ ಪೊಲೀಸ್ ಇಲಾಖೆಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ ಎನ್ನಲಾಗಿದೆ.

ನ್ಯಾಯ ಕೊಡಿಸಲು ಸದಾ ಮುಂದಿರುವ, ಬಡವರ ಕಷ್ಟ ಆಲಿಸುವ ಎಸ್ಪಿ ರಾಹುಲ್ ಕುಮಾರ್‍ಗೆ ಈತನ ವರ್ತನೆ ಸವಾಲಾಗಿ ಪರಿಣಮಿಸಿತ್ತು. ಇಂತಹ ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬ್ಲಾಕ್ಮೇಲ್ ಗಿರಾಕಿಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಪಿಎಸ್‍ಐ ಅಮಾನತು: ಈ ಹಿಂದೆ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಅವರು ಜಮೀನು ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಧಮ್ಕಿ ಹಾಕಿದ್ದಾರೆ ಎಂದು ಇದೇ ನಕಲಿ ಸಿಬಿಐ ಅಕಾರಿ ನೀಡಿದ್ದ ದೂರಿನ ಮೇರೆಗೆ ಪಿಎಸ್‍ಐ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿತ್ತು.

ಈ ಪ್ರಕರಣದಲ್ಲಿಯೇ ದೂರುದಾರನಾಗಿದ್ದ ಲಕ್ಷ್ಮೀಕಾಂತ್ ಅಲಿಯಾಸ್ ಚಂದುವಿನ ಪೂರ್ವಾಪರ ವಿಚಾರಿಸಿದ್ದರೆ, ದಕ್ಷ ಅಕಾರಿಯ ಅಮಾನತು ತಪ್ಪುತ್ತಿತ್ತು, ಇತನ ಆಟೋಟ ನಿಯಂತ್ರಿಸುವ ಅವಕಾಶವಿತ್ತು. ಆಗ ಒತ್ತಡಕ್ಕೆ ಮಣಿದಿದ್ದರಿಂದ ಈಗ ಎಸ್ಪಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬೆಳೆದಿದ್ದಾನೆ ಎನ್ನುವ ಮಾತುಗಳು ಕೇಳಿಬಂದಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು