ತುಮಕೂರು : ಜೀವಂತವಾಗಿರುವ ರೈತನಿಗೆ ಡೆತ್ ಸರ್ಟಿಫಿಕೇಟ್ ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿರುವ ಘಟನೆ ಮುಳಬಾಗಿಲುನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್. ಹೊಸಹಳ್ಳಿಯ ರೈತ ಶಿವರಾಜ್ ಪಡಿತರ ಪಡೆಯಲು ಹೋದಾಗ ಶಿವರಾಜ್ ಗೆ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಮುಳಬಾಗಿಲು ನ ಹಿಂದಿನ ತಹಸಿಲ್ದಾರ್ ಜಿ. ರಾಜಶೇಖರ್, ಗ್ರಾಮ ಲೆಕ್ಕಿಗ ಅರವಿಂದ್, ಕಂದಾಯ ನಿರೀಕ್ಷಕ ಸದಾತ್ತುವುಲ್ಲ ಖಾನ್, ನಾಡಕಚೇರಿ ಶಿರಸ್ಥೇದಾರ್ ಜಯರಾಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿ ಪಡಿತರ ನೀಲ್ಲಿಸಿ ಎಡವಟ್ಟು ಮಾಡಲಾಗಿದ್ದು, ಸದ್ಯ ಘಟನೆ ಸಂಬಂಧ ರೈತ ಶಿವರಾಜ್ ಅವರು ನಾಲ್ವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.