News Karnataka Kannada
Thursday, May 09 2024
ರಾಮನಗರ

ಶಾಕಿಂಗ್‌ ನ್ಯೂಸ್‌: ಕಾಡಾನೆ ಹತ್ಯೆ ಮಾಡಿ ರಹಸ್ಯವಾಗಿ ಹೂತು ಹಾಕಿದ ರೈತ

ಹಾಸನದಲ್ಲಿ ಮದವೇರಿದ್ದ ಕಾಡಾನೆ ತುಳಿದು ದಸರಾ ಆನೆ ಅರ್ಜುನ ಮೃತಪಟ್ಟ ಘಟನೆ ವರದಿಯಾಗಿತ್ತು. ಇದೀಗ ರಾಮನಗರದಲ್ಲಿ ರೈತರೊಬ್ಬರು ಅಕ್ರಮವಾಗಿ ತೋಟಕ್ಕೆ ವಿದ್ಯುತ್ ತಂತಿ ಹಾಕಿದ್ದ ತಂತಿ ಸ್ಪರ್ಶಿಸಿ ಮೃತಪಟ್ಟ ಆನೆಯನ್ನು ರಹಸ್ಯವಾಗಿ ಹೂತು ಹಾಕಿದ್ದ ಪ್ರಕರಣಬೆಳಕಿಗೆ ಬಂದಿದೆ.
Photo Credit : News Kannada

ರಾಮನಗರ: ಹಾಸನದಲ್ಲಿ ಮದವೇರಿದ್ದ ಕಾಡಾನೆ ತುಳಿದು ದಸರಾ ಆನೆ ಅರ್ಜುನ ಮೃತಪಟ್ಟ ಘಟನೆ ವರದಿಯಾಗಿತ್ತು. ಇದೀಗ ರಾಮನಗರದಲ್ಲಿ ರೈತರೊಬ್ಬರು ಅಕ್ರಮವಾಗಿ ತೋಟಕ್ಕೆ ವಿದ್ಯುತ್ ತಂತಿ ಹಾಕಿದ್ದ ತಂತಿ ಸ್ಪರ್ಶಿಸಿ ಮೃತಪಟ್ಟ ಆನೆಯನ್ನು ರಹಸ್ಯವಾಗಿ ಹೂತು ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಘಟನೆ ನಡೆದಿದ್ದು, ಇದೀಗ ಮೂರು ದಿನಗಳ ಬಳಿಕ ಆನೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೊರ ತೆಗೆದಿದ್ದಾರೆ. ಆದರೆ, ಅಷ್ಟರಲ್ಲಿ ಆರೋಪಿ ರೈತ ನಾಪತ್ತೆಯಾಗಿದ್ದಾರೆ.

ರೈತ ನಂಜೇಗೌಡ ಎಂಬವರು ಕಾಡಾನೆ ಹಾವಳಿಯಿಂದ ತೋಟವನ್ನು ರಕ್ಷಿಸಲು ಅಕ್ರಮವಾಗಿ ತೋಟದ ಸುತ್ತ ವಿದ್ಯುತ್ ತಂತಿ ಹಾಕಿದ್ದರು. ಇದನ್ನು ಸ್ಪರ್ಶಿಸಿ 16 ವರ್ಷದ ಗಂಡಾನೆ ಮೃತಪಟ್ಟಿತ್ತು. ಅದನ್ನು ಯಾರಿಗೂ ಗೊತ್ತಾಗದಂತೆ ನಂಜೇಗೌಡ ಹೂತುಹಾಕಿದ್ದರು. ಈ ಕುರಿತು ಸುಳಿವು ದೊರೆತ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಹಿತ ಸ್ಥಳಕ್ಕೆ ತೆರಳಿ ಕಾಡಾನೆ ಕಳೇಬರ ಹೊರ ತೆಗೆದಿದ್ದಾರೆ. ರೈತ ನಂಜೇಗೌಡ ದಂತಕ್ಕಾಗಿ ಆನೆಯನ್ನು ಸಾಯಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು