ರಾಮನಗರ: ಪಿಎಸ್ಐ ನೇಮಕಾತಿ ಹಗರಣ ಆರಂಭ ಆಗಿದ್ದೇ ಅವರ ಕಾಲದಲ್ಲಿ. ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಅವರ ಆಡಳಿತ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಸಚಿವ ಡಾ| ಅಶ್ವತ್ಥ್ ನಾರಾಯಣ್ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅರ್ಕಾವತಿ ಹಗರಣ, ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮೊದಲಾದ ಪ್ರಕರಣ ಗಳು ಏನೇನಾಗಿವೆ, ಸಿದ್ದರಾಮಯ್ಯ “ಆಳ- ಅಗಲ ಎಲ್ಲವೂ ಗೊತ್ತಿದೆ’. ಸಿದ್ದರಾಮೋತ್ಸವ ಕಾರ್ಯಕ್ರಮ ದಿಂದ ಕಾಂಗ್ರೆಸ್ನ ಕೆಲವರಿಗೆ ಆತಂಕ ಆಗಿದೆಯೇ ಹೊರತು ಬಿಜೆಪಿಗೆ ಅಲ್ಲ ಎಂದು ಹೇಳಿದರು.