ರಾಮನಗರ: ಭಾರತ ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರು ಬುಕ್ಕಿಗಳನ್ನು ರಾಮನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರಾಮನಗರದ ಬಸವನಪುರ ನಿವಾಸಿ ಶೇಖರ್ (37), ಮೈಸೂರಿನ ಎಂಆರ್ಸಿ ಕ್ಲಬ್ ಉದ್ಯೋಗಿ ಸಿದ್ದಪ್ಪ (34), ಮೈಸೂರಿನ ಸಾತಗಳ್ಳಿ ಲೇಔಟ್ ನಿವಾಸಿ ಪಂಚಾಕ್ಷರಿ (44), ಮಂಡ್ಯದ ಚಿಕ್ಕಮಂಡಿಕೆರೆ ನಿವಾಸಿ ಮಂಜು (42) ಬಂಧಿತ ಆರೋಪಿಗಳು.
ಆರೋಪಿಗಳಿಂದ 11.36 ಲಕ್ಷ ರೂ. ನಗದು, ಬೆಟ್ಟಿಂಗ್ಗಾಗಿ ಬ್ಯಾಂಕ್ ಖಾತೆಯಲ್ಲಿ ಸಂಗ್ರಹಿಸಿಟ್ಟಿದ್ದ 16.7 ಲಕ್ಷ ರೂ., ಒಂದು ಕಾರ್, ಎರಡು ಬೈಕ್, ಬ್ಯಾಂಕ್ ಚೆಕ್ ಪುಸ್ತಕಗಳು, ಎಟಿಎಂ ಕಾರ್ಡುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.