News Karnataka Kannada
Friday, May 03 2024
ರಾಮನಗರ

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಿ: ಡಿ.ಕೆ.ಶಿವಕುಮಾರ್

Dk Shivakumar Ramanagara
Photo Credit : News Kannada

ಕನಕಪುರ: ಸರ್ಕಾರ ಸರ್ವೆ ನಡೆಸಿ ಕೊರೊನಾದಿಂದ ಮೃತಪಟ್ಟವರನ್ನು ಪತ್ತೆ ಹಚ್ಚಿ ಅವರ ಕುಟುಂಬಕ್ಕೆ ಪರಿಹಾರ ವಿತರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕೊರೊನಾ ಸರ್ಕಾರ ಸಾರ್ವಜನಿಕರಿಗೆ  ನೀಡಿರುವ ಗಿಫ್ಟ್ ಆಗಿದ್ದು  ಕೊರೊನಾದಿಂದ ಸಾವನ್ನಪ್ಪಿರುವವರು ರಾಜ್ಯದಲ್ಲಿ ಹೆಚ್ಚಿದ್ದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ದೂರಿದರಲ್ಲದೆ,  ಅಧಿಕಾರಿಗಳು, ಪಿಡಿಒಗಳು, ಕಂದಾಯ ಇಲಾಖೆಯ ಅಧಿಕಾರಿಗಳು  ಮನೆಮನೆಗೆ ತೆರಳಿ ಸರ್ವೆ ನಡೆಸುವಂತೆ ಆದೇಶ ನೀಡಿ ಮುಖ್ಯಮಂತ್ರಿಗಳು ಮುಂದಾಳತ್ವ ವಹಿಸಿ ಹೆಚ್ಚು ಪರಿಹಾರ ವಿತರಿಸಲಿ ಎಂದು ಸಲಹೆ ನೀಡಿದರು.

ರಾಗಿ ಮತ್ತು ತೊಗರಿ ಜೋಳ ಖರೀದಿ ಕೇವಲ 20 ಕ್ವಿಂಟಾಲ್ ಗೆ ನಿಲ್ಲಿಸಿರುವುದು ಸರಿಯಲ್ಲ. ಕಳೆದ ಎರಡು ವರ್ಷಗಳ ಹಿಂದೆ ಯಾವ ಮಾನದಂಡವನ್ನು ಅನುಸರಿಸಿ ಖರೀದಿಮಾಡಿ ಬೆಂಬಲ ಬೆಲೆ ನೀಡುತ್ತಿದ್ದರೋ ಅದೇ ಮಾನದಂಡವನ್ನು ಮಾಡಿ ರೈತರಿಗೆ ನೆರವಾಗಿ ಕೋವಿಡ್‍ ನಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ಎಂದು ಹೇಳಿದರು.

ಸಂಸದ ಡಿ.ಕೆ.ಸುರೇಶ್ ಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಧ್ಯಕ್ಕೆ ಅದು ಚರ್ಚೆಯಲ್ಲಿಲ್ಲ. ಮುಂದೆ ರಾಜ್ಯ ರಾಜಕಾರಣ ಯಾವ ರೀತಿ ಸಾಗುತ್ತದೆಯೋ ಅದನ್ನು ನೋಡಿಕೊಂಡು ತೀರ್ಮಾನಿಸಲಾಗುವುದು. ಅದೀಗ ಅಪ್ರಸ್ತುತ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು