ದುಬೈ : ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ವ್ಯಪಾರಸ್ಥ ಕನ್ನಡಿಗರಿಗಾಗಿ ದುಬೈ ಕೇಂದ್ರೀಕೃತವಾಗಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ಯುಏಇ ಕನ್ನಡಿಗರು ಸಂಘವು “ಕನ್ನಡಿಗರಿಂದ ಕನ್ನಡಿಗರಲ್ಲಿ ವ್ಯವಹಾರ” ಎಂಬ ಶೀರ್ಷಿಕೆಯೊಂದಿಗೆ ಸ್ಥಾಪಿಸಿದ ವೇದಿಕೆಯಾದ “ಯುಎಇ ಕನ್ನಡಿಗಾಸ್ ಬಿಸ್ನೆಸ್ ಫೋರಂ”ನ 4ನೇ ವಾರ್ಷಿಕ ಸಭೆ ದಿನಾಂಕ 08-01-2022ರಂದು ದೇರಾ ದುಬೈಯಲ್ಲಿರುವ ಬೆಸ್ಟ್ ವೆಸ್ಟೆರ್ನ್ ಪರ್ಲ್ ಕ್ರೀಕ್ ಹೋಟೆಲ್ ಬಾಲ್ ರೂಮಿನಲ್ಲಿ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಗೌಡ ಅವರು ಅಲಂಕರಿಸದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಯುಏಇ ಯಲ್ಲಿ ಸ್ವಂತ ಉದ್ಯಮಗಳನ್ನು ಹೊಂದಿರುವ ಅನಿವಾಸಿ ಕನ್ನಡಿಗರು ಮತ್ತು ಕನ್ನಡೇತರರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅನಿವಾಸಿ ಕನ್ನಡಿಗರು ಪಾಲ್ಗೊಂಡು ಪರಸ್ಪರ ವ್ಯಾಪಾರ ವಿನಿಮಯ ಮಾಡಿಕೊಂಡರು, ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ತಮ್ಮ ತಮ್ಮ ಉತ್ಪನ್ನ ವ್ಯಾಪಾರ ವಹಿವಾಟುಗಳ ಬಗ್ಗೆ ಪ್ರಾಜೆಕ್ಟ್ ಬಳಸಿ ಕೂಲಂಕುಷವಾಗಿ ವಿವರಿಸಿದರು.
ಸಭೆಯನ್ನು ನಡೆಸಲು ಮುಖ್ಯ ವಾಹಿನಿಯಲ್ಲಿ ಹೆಮ್ಮೆಯ ಕನ್ನಡಿಗರು ತಂಡದ ರಫೀಕಲಿ ಕೊಡಗು ಮತ್ತು ಸೆಂಥಿಲ್ ಬೆಂಗಳೂರು ಅವರು ಇದ್ದರು, ಸಭೆಯಲ್ಲಿ ಹೆಮ್ಮೆಯ ಕನ್ನಡಿಗರು ತಂಡದ ಸಮಿತಿ ಸದಸ್ಯರುಗಳಾದ ವರದರಾಜ್ ಕೋಲಾರ ಮತ್ತು ಅಕ್ರಮ್ ಕೊಡಗು ಅವರು ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಸಮಿತಿ ಸದಸ್ಯೆ ಆಶಾ ಕುಂದಾಪುರ ಅವರು ನೆರವೇರಿಸಿದರು.