ಬೆಂಗಳೂರು: ಶುಕ್ರವಾರ ನಿಧನರಾದ ಸ್ಯಾಂಡಲ್ವುಡ್ ಹಿರಿಯ ನಟಿ ಲೀಲಾವತಿಯವರ ಅಂತ್ಯ ಕ್ರಿಯೆ ಶನಿವಾರ ಅವರ ತೋಟದ ಮನೆಯಲ್ಲಿ ನೇರವೇರಿತು. 3ನೇ ದಿನವಾದ ಇಂದು ಹಾಲು-ತುಪ್ಪದ ಕಾರ್ಯ ನೆರವೇರಲಿದೆ ಎಂದು ಮಗ ವಿನೋದ್ ರಾಜ್ ಹೇಳಿದ್ದಾರೆ.
ಕಳೆದ ದಿನ ಅಂತ್ಯಕ್ರಿಯೆಯ ಬಳಿಕ ಮಾತನಾಡಿದ ವಿನೋದ್ ರಾಜ್, ನಾಳೆ ಮೂರನೇ ದಿನವಾದ ಹಿನ್ನೆಲೆ ಹಾಲು-ತುಪ್ಪದ ಕಾರ್ಯ ನೆರವೇರಲಿದೆ ಎಂದರು. 9,10,11 ನೇ ದಿನಗಳ ಕಾರ್ಯಗಳನ್ನ ನೆರವೇರಿಸಲಾಗುತ್ತೆ ಎಂದು ಹೇಳಿದ್ದರು. ಅದರಂತೆಯೇ ಇಂದು ಹಾಲು-ತುಪ್ಪದ ಕಾರ್ಯ ನೆರವೇರಲಿದೆ.
ಬಳಿಕ ಮಾತನಾಡಿದ ವಿನೋದ್ ರಾಜ್, ಅಂತಿಮ ದರ್ಶನಕ್ಕೆ ಬಂದ ಜನರು ಶಾಂತ ರೀತಿಯಿಂದ ನಡೆದುಕೊಂಡ್ರು. ದರ್ಶನಕ್ಕೆ ಬಂದವರನ್ನ ನೋಡಿ ಆಶ್ಚರ್ಯ, ವಿಸ್ಮಯ ಆಗೋಯ್ತು. ನನಗೆ ನಾನೇ ಸಮಾಧಾನ ಮಾಡಿಕೊಂಡು ಮುನ್ನಡೆಯುವೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಚಿವರು, ಶಾಸಕರು, ಚಿತ್ರರಂಗದ ಹಲವು ದಿಗ್ಗಜ ನಟ-ನಟಿಯರು ಅಮ್ಮನ ದರ್ಶನ ಪಡೆದರು. ಇವೆಲ್ಲರಿಗೂ ನಾಡಿನ ಜನತೆಗೂ ಧನ್ಯವಾದಗಳು ಎಂದರು.