ಕೋಲಾರ: ಮದುವೆಗೂ ಮುನ್ನ ವಿವಾಹಿತೆಯೊಬ್ಬಳ ಸಹವಾಸ ಮಾಡಿದ್ದ ನವವಿವಾಹಿತ ಯುವಕನೊಬ್ಬ ಆಕೆಯಿಂದಲೇ ದುರಂತ ಅಂತ್ಯ ಕಂಡಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.
ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಾಬೀರ್ಗೆ ಕಳೆದ ತಿಂಗಳು ಮದುವೆ ಆಗಿತ್ತು. ಇದಾದ ಕೆಲವೇ ದಿನದಲ್ಲಿ ಈತ ನಾಪತ್ತೆಯಾಗಿದ್ದ. ಪಾಲಕರು ಮಗ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ ಈತನ ಶವ ಬೀದರ್ನ ನಿಡುವಂಚಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಈತ ಕಾಣೆಯಾದ ದಿನವೇ ಕೊಲೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈತ ಕೊಲೆಯಾಗಿದ್ದು ತನ್ನ ಪ್ರೇಯಸಿ ಕೈಯಿಂದಲೇ ಎಂಬ ಭಯಾನಕ ರಹಸ್ಯ ಬಯಲಾಗಿದೆ.
ಬೇರೆ ರಾಜ್ಯಗಳಿಂದ ಕಾರುಗಳನ್ನು ಖರೀದಿಸಿ ತಂದು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಜಾಬೀರ್, ಜಿಮ್ ಬಾಡಿ ಮೇಂಟೈನ್ ಮಾಡಿಕೊಂಡು ಗಟ್ಟಿಮುಟ್ಟಾಗಿದ್ದ. ತನ್ನ ಮದುವೆಗೂ ಮುನ್ನ ತಂದೆಯ ದೂರದ ಸಂಬಂಧಿ ವಿವಾಹಿತ ಮಹಿಳೆ ಝಕಿಯಾ ಜತೆ ಸಲುಗೆ ಬೆಳೆಸಿಕೊಂಡಿದ್ದ. ಝಕಿಯಾಗೆ ಜಾಬೀರ್ ಮೇಲೆ ಮೋಹ ಅನೈತಿಕ ಸಂಭಂದವಾಗಿ ಬದಲಾಗಿತ್ತು.
ಈ ನಡುವೆ ಜಾಬೀರ್ಗೆ ಪಾಲಕರು ಚಿಕ್ಕಬಳ್ಳಾಪುರದಲ್ಲಿ ಬೇರೊಬ್ಬ ಯುವತಿ ಜತೆ ಮದುವೆ ಮಾಡಿದ್ದರು. ತನ್ನ ಪ್ರಿಯಕರ ಬೇರೊಬ್ಬಳನ್ನು ಮದುವೆ ಮಾಡಿಕೊಂಡದ್ದನ್ನು ಸಹಿಸದ ಝಕಿಯಾ, ಏನೇನೋ ನೆಪ ಹೇಳಿ ಜಾಬೀರ್ನನ್ನು ಹೈದ್ರಾಬಾದ್ಗೆ ಕರೆಸಿಕೊಳ್ಳುವ ನಾಟಕವಾಡಿದ್ದಾಳೆ. ಬಳಿಕ ದಾರಿ ಸುಪಾರಿ ಕೊಟ್ಟು ಮಾರ್ಗಮಧ್ಯೆ ಭೀಕರವಾಗಿ ಕೊಲೆ ಮಾಡಿಸಿದ್ದಾಳೆ.
ವಿವಾಹಿತೆ ಮೇಲಿನ ಮೋಹಕ್ಕೆ ಪ್ರಾಣ ಕಳೆದುಕೊಂಡ ನವವಿವಾಹಿತ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.