ಬೆಂಗಳೂರು: ರಾಜ್ಯ ಸರ್ಕಾರ ಅರ್ಚಕರಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಅರ್ಚಕರ ಹೆಂಡತಿ, ಮಕ್ಕಳಿಗೂ ಕಾಶಿಯಾತ್ರೆ ಭಾಗ್ಯ ಕಲ್ಪಿಸಿದೆ. ಈ ಮೂಲಕ ಅರ್ಚಕರ ಮತ್ತೊಂದು ಮನವಿಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ತಥಾಸ್ತು ಎಂದಿದ್ದಾರೆ.
‘ಕರ್ನಾಟಕ ಭಾರತ್ ಗೌರವ್ ಕಾಶಿ ಗಯಾ’ ಈ ಯೋಜನೆಯಡಿ ಅರ್ಚಕರ ಜೊತೆಗೆ ಅರ್ಚಕರ ಕುಟುಂಬಸ್ಥರೂ ಕೂಡ ಉಚಿತವಾಗಿ ಕಾಶಿ ಯಾತ್ರೆ ಕೈಗೊಳ್ಳಬಹುದು.
ಪ್ರತಿ ಟ್ರಿಪ್ ನಲ್ಲಿ 60 ಜನರಂತೆ, ವರ್ಷಕ್ಕೆ 1200 ಅರ್ಚಕರು / ನೌಕರರು ಹೋಗಬಹುದು. ಈ ಯೋಜನೆಯಡಿ ಉಚಿತವಾಗಿ ಕಾಶಿ ಯಾತ್ರೆ ಮಾಡಬಹುದು. ಕುಟುಂಬದ ತಂದೆ/ ತಾಯಿ/ ಮಡದಿ/ ಮಕ್ಕಳು ಹೀಗೆ ಕುಟುಂಬದ ಒಬ್ಬರಿಗೆ ಉಚಿತ ಯಾತ್ರೆಗೆ ಅವಕಾಶ ನೀಡಿದ್ದಾರೆ. ಅರ್ಚಕರ ಜೊತೆ ಕುಟುಂಬದ ಒಬ್ಬರು ಉಚಿತವಾಗಿ ಕಾಶಿಯಾತ್ರೆ ಮಾಡಬಹುದು. ಈಗಾಗಲೇ ಮೊದಲ ಬ್ಯಾಚ್ ಉಚಿತವಾಗಿ ಕಾಶಿ ಯಾತ್ರೆಗೆ ಹೊರಟಿದೆ. ಎರಡನೇ ಬ್ಯಾಚ್ ಕಾಶಿಯಾತ್ರೆಗೆ ಮುಂದಿನ ತಿಂಗಳು ಹೊರಡಲಿದೆ.