ಚಿತ್ರದುರ್ಗ: ಜಿಲ್ಲೆಯ, ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಇಬ್ಬರು ಮಕ್ಕಳು ಅಸಹಜವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಓಬಳೇಶ್(5), ಬಿಂದು(3). ನಿನ್ನೆ ರಾತ್ರಿ ಇಬ್ಬರೂ ಮಕ್ಕಳು ವಾಂತಿ ಮಾಡಿಕೊಂಡಿದ್ದರು. ಮಕ್ಕಳಿಗೆ ಅಜ್ಜ ದುರ್ಗಪ್ಪ ಮತ್ತು ಅಜ್ಜಿ ರೇಣುಕಾ ಭಂಡಾರದ ನೀರನ್ನು ಮಕ್ಕಳಿಗೆ ಕುಡಿಸಿದ್ದರು. ಬೆಳಗಾಗುವುದರೊಳಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆಗೆ ತಾಯಿ ಕಾವೇರಿ ದೂರು ನೀಡಿದ್ದಾರೆ.