ಚಿತ್ರದುರ್ಗ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಬುಧವಾರ ಭೇಟಿ ನೀಡಿ ಮಠದ ಮೂಲ ಕರ್ತೃ ಗದ್ದುಗೆಗೆ ನಮಿಸಿದರು.
ಇದೇ ಸಂದರ್ಭದಲ್ಲಿ ಮಠದ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿಗಳು ಸೇರಿದಂತೆ ನಾನಾ ಮಠಗಳ ಸ್ವಾಮೀಜಿಗಳನ್ನು ರಾಹುಲ್ ಗಾಂಧಿ ಅವರು ಸನ್ಮಾನಿಸಿದರು. ಮುರುಘಾ ಶ್ರೀಗಳು ರಾಹುಲ್ ಗಾಂಧಿ ಅವರಿಗೆ ಲಿಂಗಪೂಜೆ ಹಾಗೂ ಲಿಂಗಾಯತ ಧರ್ಮ ಮಹತ್ವದ ಬಗ್ಗೆ ವಿವರಿಸಿ, ಅವರಿಗೆ ಲಿಂಗಧಾರಣೆ ಮಾಡಿದರು. ಜತೆಗೆ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಸಾಮಾಜಿಕ ನ್ಯಾಯ ಘಟಕದ ಅಧ್ಯಕ್ಷ ಸಿ ಎಸ್ ದ್ವಾರಕನಾಥ್ ಮತ್ತಿತರರು ಹಾಜರಿದ್ದರು.
PHOTO CREDIT : G.Mohan, Photojournalist, Bengaluru