ಹೊಸದಿಲ್ಲಿ: ದೇಶಾದ್ಯಂತ ಬೇರೆ ಬೇರೆ ಪಕ್ಷಗಳ ಸರಕಾರಗಳನ್ನು ಉರುಳಿಸಲು ಬಿಜೆಪಿ 6,300 ಕೋಟಿ ರೂ. ವೆಚ್ಚ ಮಾಡಿದೆ. ಇಷ್ಟು ಹಣ ವೆಚ್ಚ ಮಾಡದೇ ಇರುತ್ತಿದ್ದರೆ, ಆಹಾರ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಬೇಕಾದ ಪರಿಸ್ಥಿತಿ ಉದ್ಭವವೇ ಆಗುತ್ತಿರಲಿಲ್ಲ ಎಂದು ಹೇಳಿದರು.
ಮಜ್ಜಿಗೆ, ಮೊಸರು, ಜೇನುತುಪ್ಪ, ಗೋದಿ, ಅಕ್ಕಿ ಮೇಲಿನ ಜಿಎಸ್ಟಿಯಿಂದ ಸರಕಾರಕ್ಕೆ ವಾರ್ಷಿಕ 7,500 ಕೋಟಿ ರೂ. ಆದಾಯವಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ .
ಇದೇ ವೇಳೆ, ದಿಲ್ಲಿಯ ಬಿಜೆಪಿ ಶಾಸಕರು ಅಣಕು ವಿಧಾನಸಭೆ ಅಧಿವೇಶನ ನಡೆಸಿ ಆಪ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮದ್ಯ ಹಗರಣ ಸಂಬಂಧ ಡಿಸಿಎಂ ಸಿಸೋಡಿಯಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.