News Karnataka Kannada
Sunday, May 12 2024
ಚಿತ್ರದುರ್ಗ

ಬೋನ್‌ಮೆರಾ ಟ್ರಾನ್ಸ್‌ಲೆಂಟ್ ಚಿಕಿತ್ಸೆಗೆ ಕೇಂದ್ರ ಸರ್ಕಾರದಿಂದ 10 ಲಕ್ಷ ನೆರವು : ಡಾ. ರವಿ ಜೋಷಿ

News
Photo Credit :

ಚಿತ್ರದುರ್ಗ: ಪ್ರತಿ ವರ್ಷ ಸರಾಸರಿ 10 ಸಾವಿರಕ್ಕೂ ಹೆಚ್ಚು ಥಲಸ್ಸೆಮಿಯಾ ರೋಗ ಹೊಂದಿದ ಮಕ್ಕಳು ಜನಿಸುತ್ತಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡಾ 3 ರಿಂದ 4 ರಷ್ಟು ಜನರು ರೋಗ ಹೊಂದಿದ್ದಾರೆ ಎಂದು ನಾರಾಯಣ ಹೆಲ್ತ್, ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕೊಲಾಜಿ ಮತ್ತು ರಕ್ತ ಮತ್ತು ಮಜ್ಜೆಯ ಕಸಿ ವಿಭಾಗದ ನಿರ್ದೇಶಕ ಮತ್ತು ಕ್ಲಿನಿಕಲ್ ಲೀಡ್ ಮುಖ್ಯಸ್ಥ ಡಾ.ಸುನಿಲ್ ಭಟ್ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆಯ ಓಬೆರಾಯ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರಾದೃಷ್ಟವಶಾತ್ ಈ ರೋಗವನ್ನು ಅಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಈ ಜಾಗೃತಿ ಸೆಮಿನಾರ್ ಮತ್ತು ಉಚಿತ ಸ್ಕ್ರೀನಿಂಗ್ ಶಿಬಿರದ ಮೂಲಕ, ನಾವು ಪರಿಸ್ಥಿತಿಯ ಬಗ್ಗೆ ಉತ್ತಮ ಅರಿವು ಮೂಡಿಸಲು ಮತ್ತು ಅದರಿಂದ ಬಳಲುತ್ತಿರುವವರಿಗೆ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು. ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲು ಬಯಸಿದ್ದೇವೆ ಎಂದು ಹೇಳಿದರು.

ತಲಸ್ಸೆಮಿಯಾವು ವಿಭಿನ್ನ ಅಥವಾ ದೇಹವು ಹಿಮೋಗ್ಲೋಬಿನ್ ಉತ್ಪತ್ತಿ ಮಾಡುವ ಕಾಣೆಯಾದ ಜೀನ್‌ಗಳಿಂದ ಉಂಟಾಗುತ್ತದೆ. ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಉತ್ಪತ್ತಿ ಮಾಡುವುದರ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಥಲಸ್ಸೆಮಿಯಾ ಹೊಂದಿರುವ ಜನರು ಕಡಿಮೆ ಹಿಮೋಗ್ಲೋಬಿನ್ ಹೊಂದಿರುತ್ತಾರೆ. ಸಾಮಾನ್ಯಕ್ಕಿಂತ ಕಡಿಮೆ ರಕ್ತ ಪರಿಚಲನೆ, ಕೆಂಪು ರಕ್ತ ಕಣಗಳನ್ನು ಹೊಂದಿರುತ್ತಾರೆ. ಇದು ರಕ್ತಹೀನತೆಗೆ ಕಾರಣವಾಗುತ್ತದೆ ಎಂದರು.

ಇದು ಜೀವಮಾನವಿಡೀ ರಕ್ತ ವರ್ಗಾವಣೆಯ ಅಗತ್ಯತೆಗೆ ಕಾರಣವಾಗುತ್ತದೆ. ಥಲಸ್ಸೆಮಿಯಾಕ್ಕೆ ಸಂಬಂಧಿಸಿದಂತೆ ಅವರು ಹೊಂದಿರುವ ಜೀನ್‌ಗಳನ್ನು ಖಚಿತಪಡಿಸಿಕೊಳ್ಳಲು ಅವರ ಮದುವೆಗೆ ಮೊದಲು ವ್ಯಕ್ತಿಗಳ ಮೇಲೆ ಕೆಲವು ಪರೀಕ್ಷೆಗಳಿಗೆ ಒಳಗಾಗುವ ಮೂಲಕ ಥಲಸ್ಸೆಮಿಯಾವನ್ನು ತಡೆಯಬಹುದು. ಈ ಸ್ಥಿತಿಗೆ ಅಸ್ಥಿಮಜ್ಜೆಯ ಕಸಿ ಮಾತ್ರ ಚಿಕಿತ್ಸೆ ಎಂದು ಡಾ. ಸುನಿಲ್ ಭಟ್ ಹೇಳಿದರು.

ಡಾ.ರವಿ ಜೋಷಿ ಮಾತನಾಡಿ, ಇದು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುವ ರೋಗವಾಗಿದೆ. ಈ ರೋಗ ಬಂದ ಮಕ್ಕಳ ಚಟುವಟಿಕೆ ಕಡಿಮೆಯಾಗುತ್ತದೆ. ಹೊಟ್ಟೆ ಊತ, ಮೈ ಧರ್ಮ ಬಿಳಿಚಿಕೊಳ್ಳುತ್ತದೆ. ಮುಖದ ಕಾಂತಿ ಮಂಕಾಗುತ್ತದೆ. ಈ ರೋಗ ಬಂದಲ್ಲಿ ಪ್ರತಿ ಮೂರ‍್ನಾಲ್ಕು ವಾರಕ್ಕೊಮ್ಮೆ ರಕ್ತ ಹಾಕಿಸುತ್ತಿರಬೇಕು. ಅಂದಾಗ ಅಂತಹ ಮಗು ಬದುಕುಳಿಯಲು ಸಾಧ್ಯ ಎಂದು ಹೇಳಿದರು.

ಮಗುವಿನ ದೇಹದಲ್ಲಿ ೯ ೧/೨ ರಿಂದ ೧೦ ೧/೨ ಪ್ರಮಾಣದಲ್ಲಿ ಹಿಮೋಗ್ಲೋಬಿನ್ ಅಂಶ ಇರಬೇಕು. ತಪ್ಪಿದಲ್ಲಿ ಬೆಳವಣಿಗೆ ಕುಂಟಿತವಾಗುತ್ತದೆ. ಪ್ರತಿ ಬಾರಿ ರಕ್ತ ಹಾಕಿಸುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಅಲ್ಲದೇ ೧೨ ವರ್ಷದೊಳಗಿನ ಮಕ್ಕಳಿಗೆ ಬೋನ್‌ಮೆರಾ ಟ್ರಾನ್ಸ್‌ಲೆಂಟ್ ಚಿಕಿತ್ಸೆ ನೀಡಲಾಗುವುದು. ಈ ಚಿಕಿತ್ಸೆಗೆ ಒಳಗಾಗುವ ಮಗುವಿಗೆ ಕೇಂದ್ರ ಸರ್ಕಾರ ೧೦ ಲಕ್ಷ ರೂ. ನೆರವು ನೀಡಲಿದೆ ಎಂದರು.

ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಶ್ರೀರಾಮ್ ಮಾತನಾಡಿ, ಈ ರೋಗ ಬಂದಲ್ಲಿ ಆಗಾಗ ರಕ್ತ ಹಾಕಿಸಬೇಕಾಗುತ್ತದೆ. ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಇದರಿಂದ ಪೋಷಕರಿಗೆ ಆರ್ಥಿಕವಾಗಿ ಕಷ್ಟವಾಗುತ್ತದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಓಪಿಡಿ ಆರಂಭಿಸಿ ಚಿಕಿತ್ಸೆ ಕೊಡಿಸುವ ಉದ್ದೇಶವಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ದೇವರಾಜ್, ಡಾ.ರೂಪ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು