ಚಿತ್ರದುರ್ಗದ ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈರುಳ್ಳಿ ತುಂಬಿದ್ದ ಲಾರಿ ಟೈರ್ ಸ್ಫೋಟಗೊಂಡು, ಲಾರಿ ಪಲ್ಟಿಯಾಗಿದೆ. ಗದಗ ಮೂಲದ ಪ್ರಶಾಂತ್, ಹನುಮಪ್ಪ, ರಮೇಶ್, ಗುರಪ್ಪ ಮೃತರು.
ಟೈರ್ ಸ್ಫೋಟದಿಂದ ಲಾರಿ ಪಲ್ಟಿಯಾಗಿದ್ದು, ಲಾರಿ ಪಲ್ಟಿಯಿಂದ ಒಂದು ಕಾರು, ಆರು ಲಾರಿಗಳ ನಡುವೆ ಸರಣಿ ಅಪಫಾತ ಸಂಭವಿಸಿದೆ. 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ