ಬೆಂಗಳೂರು: ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಸಿಎನ್ ಅಶ್ವತ್ಥನಾರಾಯಣ ಅವರು ತಮ್ಮ ಕ್ಷೇತ್ರದ ಭಾಗವಾದ ಮಲ್ಲೇಶ್ವರಂನ ಪಾರ್ಸಿ ಉದ್ಯಾನದಲ್ಲಿ ಸ್ಯಾಂಡಲ್ ಉರುಸ್ನಲ್ಲಿ ಭಾಗವಹಿಸಿದರು.
ಬಳಿಕ ಉರುಸ್ ನಲ್ಲಿ ಪ್ರಾರ್ಥನೆ ಸಲ್ಲಿಸಿದ ಸಚಿವರು, ಭಾರತವು ಕೋಮು ಸೌಹಾರ್ದತೆಗೆ ಹೆಸರಾದ ದೇಶ ಎಂದು ಹೇಳಿದರು.
ಕರ್ನಾಟಕ ಸರ್ವಧರ್ಮಗಳ ತೋಟವಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಸಹೋದರರಂತೆ ಬಾಳಬೇಕು ಎಂದರು.
ಸ್ಥಳೀಯ ಬಿಜೆಪಿ ಹಾಗೂ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.