ಬೆಂಗಳೂರು(ಫೆ.03) : 30 ಲಕ್ಷ ರೂ. ಹಣಕ್ಕಾಗಿ ಪಾರ್ಟನರ್ ಆಗಿದ್ದವರೇ ಕಿಡ್ನಾಪರ್ಸ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡ್ನಾಪ್ ಮಾಡಿದ ಮೂರೇ ಗಂಟೆಯಲ್ಲೇ ಖದೀಮರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ(ಬುಧವಾರ) 9.40 ಕ್ಕೆ ಎಂಜಿನೀಯರ್ ಮಾನಸ್ ಎಂಬುವರನ್ನ ಕಿಡ್ನಾಪ್ ಮಾಡಲಾಗಿತ್ತು. ಅಪಹರಣವಾಗಿ ಕೇವಲ ಮೂರೇ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದೆ ಖಾಕಿಪಡೆ.
ನಂದ, ಸುನೀಲ್ ಸೇರಿದಂತೆ ಐವರು ಮಾನಸ್ ಅವರನ್ನ ಕಿಡ್ನಾಪ್ ಮಾಡಿ 30 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು.