ಬೆಂಗಳೂರು: ಸಂಗೀತ್ ನೃತ್ಯ ಭಾರತಿ ಅಕಾಡೆಮಿಗೆ ಐವತ್ತು ವರ್ಷ ತುಂಬಿರುವ ಹಿನ್ನಲೆಯಲ್ಲಿ ಸೆ.04 ರಿಂದ 11 ರವರೆಗೂ ನಗರದ ನಾಗರಬಾವಿ, ಕಲ್ಯಾಣನಗರದಲ್ಲಿರುವ ಸುಸಜ್ಜಿತ ಜ್ಞಾನ ಸೌಧ ಸಭಾಂಗಣದಲ್ಲಿ ಕಲಾಶ್ರೀ ಉತ್ಸವ ವನ್ನು ಹಮ್ಮಿಕೊಳ್ಳಲಾಗಿದೆ.
ಶಾಸ್ತ್ರೀಯ ನೃತ್ಯ ಕಲೆಗಳಲ್ಲಿ ಒಂದಾದ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತವನ್ನು ಆಧಾರವಾಗಿಟ್ಟುಕೊಂಡು ಸಂಗೀತ್ ನೃತ್ಯ ಭಾರತಿ ಅಕಾಡೆಮಿಯು ಕಳೆದ ಐದು ದಶಕಗಳಿಂದ ತಮ್ಮದೇ ಆದ ರೀತಿಯಲ್ಲಿ ಕಲಾ ಸೇವೆಯನ್ನು ಮಾಡುತ್ತಾ ಬರುತ್ತಿದೆ. ಈಗ ಈ ಸಂಸ್ಥೆಗೆ ಐವತ್ತರ ಸಂಭ್ರಮ. ಈ ಐವತ್ತರ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ಸಂಸ್ಥೆಯ ಕಲಾತ್ಮಕ ನಿರ್ದೇಶಕರುಗಳಾದ ಕಾರ್ಯದರ್ಶಿ ಬಿ ಆರ್ ಹೇಮಂತ್ ಕುಮಾರ್ ಮತ್ತು ಶ್ರೀಮತಿ ಪದ್ಮ ಹೇಮಂತ್ ನಿರ್ಧರಿಸಿದ್ದು, ಈ ನಿಮಿತ್ತ ಹಲವಾರು ವರ್ಷಗಳಿಂದ ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಹೆಮ್ಮೆಯ ಸಂಗೀತ ಮತ್ತು ನೃತ್ಯೋತ್ಸವ- ‘ಕಲಾಶ್ರೀ ಉತ್ಸವ’ ವನ್ನು ಮತ್ತಷ್ಟು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದಾರೆ. ಕಲಾಶ್ರೀ ಉತ್ಸವದಲ್ಲಿ ನಮ್ಮ ದೇಶದ ಪ್ರತಿಷ್ಠಿತ ಕಲಾವಿದರುಗಳು, ನೃತ್ಯ ಕ್ಷೇತ್ರದ ಸಾಧಕರು, ಕರ್ನಾಟಕ ಸಂಗೀತದ ದಿಗ್ಗಜರು ಪಾಲ್ಗೊಳ್ಳುತ್ತಿದ್ದಾರೆ.
ಕಲಾಮಂಡಲಂ ಉಷಾ ದಾತಾರ್, ವೈಜಯಂತಿ ಕಾಶಿ, ಮಂಜುಳಾ ಪರಮೇಶ್, ಕಿರಣ್ ಸುಬ್ರಮಣ್ಯಂ, ಸಂಧ್ಯಾ ಕಿರಣ್, ಪೂರ್ಣಿಮಾ ಕೆ ಗುರುರಾಜ, ಬೃಂದಾ ಕೆ ಅಯ್ಯಂಗಾರ್, ನವ್ಯಾ ನಟರಾಜನ್, ಸತ್ಯನಾರಾಯಣ ರಾಜು, ಸೌಂದರ್ಯ ಶ್ರಿವತ್ಸ, ಸುಪರ್ಣ ವೆಂಕಟೇಶ್, ಅಶೋಕ್ ಕುಮಾರ್, ಸುಧೀರ್ ಕುಮಾರ್, ಶುಭ ಧನಂಜಯ್, ರೂಪಶ್ರೀ ಮಧುಸುದನ್, ಮಾಲಿನಿ ರವಿಶಂಕರ್, ಮಮತಾ ಕಾರಂತ್, ಪೂರ್ಣ ಸುರೇಶ್, ಸುಮನಾ ಆರ್, ವಿದ್ಯಾಲಕ್ಷ್ಮಿ , ಚೇತನ್ ಗಂಗಟ್ಕರ್ ಚಂದ್ರಪ್ರಭಾ ಚೇತನ್, ಮಿಥುನ್ ಶಾಮ್, ಇಂದು ಸಂತೋಷ್. ಇವರುಗಳಲ್ಲದೆ ಕರ್ನಾಟಕ ಸಂಗೀತ ಕ್ಷೇತ್ರದ ದಿಗ್ಗಜರುಗಳಾದ ಶ್ರೀ ಆನೂರು ಅನಂತಕೃಷ್ಣ ಶರ್ಮ, ಡಾ. ಹಂಸಿನಿ ನಾಗೇಂದ್ರ, ಸುಶೀಲಾ, ವಿದ್ವಾನ್ ಜಿ ಗುರುಮೂರ್ತಿ, ಶ್ರೀವತ್ಸ ಡಿ ಎಸ್, ಬಾಲಸುಬ್ರಹ್ಮಣ್ಯ ಶರ್ಮ, ವಾಣಿ ಹರಿಕೃಷ್ಣ, ಭಾರತಿ ವೇಣುಗೋಪಾಲ್, ಸುಗ್ಗನಹಳ್ಳಿ ಷಡಕ್ಷರಿ, ಹರೀಶ್ ನಾಗರಾಜು ಮುಂತಾದವರು ಆಗಮಿಸಲಿದ್ದಾರೆ.