ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಇಂತಹ ಪೈಶಾಚಿಕ ಕೃತ್ಯವೆಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಆ ವ್ಯಕ್ತಿಗಳು ರಾಜ್ಯದಲ್ಲಿ ಬೆಳೆಯಲು ಬಿಟ್ಟಿದೆ. ಟೈಲರ್ ಹತ್ಯೆ ಬಗ್ಗೆ ರಾಜಸ್ಥಾನ ಸರ್ಕಾರ ಉತ್ತರ ಕೊಡಬೇಕು ಎಂದರು.
ಮತಾಂಧ ಶಕ್ತಿಗಳು ತಲೆ ಎತ್ತಲು ಬಿಡಬಾರದು. ಅಂತವರ ಅಟ್ಟಹಾಸವನ್ನು ಸರ್ಕಾರಗಳು ಮಟ್ಟಹಾಕಬೇಕಿದೆ. ಮತಾಂಧ ಶಕ್ತಿಗಳು ಧರ್ಮ ಎಂದರೆ ರಕ್ತಪಾತ, ಹತ್ಯೆ ಎಂದು ಕೊಂಡು ಬಿಟ್ಟಿದ್ದಾರೆ. ಇಂತಹ ತಿಳುವಳಿಕೆ ಇಡೀ ಜಗತ್ತಿಗೆ ಅಪಾಯಕಾರಿಯಾಗಿದೆ. ಇಂತಹ ಶಕ್ತಿಗಳನ್ನು ನಿಯಂತ್ರಿಸಬೇಕಿದೆ.