ಬೆಂಗಳೂರು: ರಾಜ್ಯದಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಲಾಗುತ್ತದೆ. ಹೈ ರಿಸ್ಕ್ ದೇಶಗಳಿಂದ ಬರೋ ವಿದೇಶಿಗಳ ಬಗ್ಗೆ ನಿಗಾ ವಹಿಸಲಾಗುತ್ತದೆ. 6-12 ವರ್ಷದ ಶಾಲಾ ಮಕ್ಕಳಿಗೆ ಲಸಿಕೆಯನ್ನು ಅಭಿಯಾನ ನಡೆಸೋ ಮೂಲಕ ನೀಡಲಾಗುತ್ತದೆ. 3ಟಿ ಸೂತ್ರವನ್ನು ಅಳವಡಿಸಿಕೊಳ್ಳಲಾಗುತ್ತದೆ. ಆದ್ರೇ ಸದ್ಯಕ್ಕೆ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಿಲ್ಲ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪ್ರಧಾನಿ ಮೋದಿಯವರೊಂದಿಗಿನ ವೀಡಿಯೋ ಕಾನ್ಫೆರೆನ್ಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. 9ನೇ ತಾರೀಕಿನ ನಂತ್ರ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಾಗಿದೆ. ಪ್ರತಿದಿನ 30 ಸಾವಿರ ಟೆಸ್ಟಿಂಗ್. 10 ಸಾವಿರ ಬಂಗಳೂರು, 20 ಸಾವಿರ ಕರ್ನಾಟಕ ರಾಜ್ಯಾಧ್ಯಂತ ಆಗಿದೆ. ಹೈ ರಿಸ್ಕ್ ದೇಶಗಳಿಂದ ಬರೋ ವಿದೇಶಿಗರ ಮೇಲೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ ಎಂದರು.
ಆಕ್ಸಿಜನ್, ಕೊರೋನಾ ವ್ಯಾಕ್ಸಿನ್ ತ್ವರಿತಕ್ಕೂ ಸೂಚಿಸಿದ್ದಾರೆ. 6-12 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಅಭಿಯಾನದ ರೀತಿಯಲ್ಲಿ ಮಾಡಿ ವ್ಯಾಕ್ಸಿನ್ ಕೊಡುವಂತೆ ಸೂಚಿಸಿದ್ದಾರೆ. ಬೂಸ್ಟರ್ ಡೋಸ್ ಹೆಚ್ಚಿಸುವಂತೆ ತಿಳಿಸಿದ್ದಾರೆ. ಟ್ರಾಕ್, ಟ್ರೇಸ್, ಟ್ರೀಟ್ಮೆಂಟ್ ಸೂತ್ರವನ್ನು ಅಳವಡಿಸುವಂತೆ ತಿಳಿಸಿದ್ದಾರೆ. ಮಾಸ್ಕ್ ಕಡ್ಡಾಯ ನಿಯಮ ಹೆಚ್ಚುಗೊಳಿಸಲು ತಿಳಿಸಿದ್ದಾರೆ.
ವ್ಯಾಕ್ಸಿನ್ ಕೊರೋನಾಗೆ ಮದ್ದು. ಅದನ್ನು ತ್ವರಿತಗೊಳಿಸಿ. ಆರ್ಥಿಕ ಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅನಾವಶ್ಯಕ್ಕ ನಿಯಮಗಳನ್ನು ಮಾಡಬಾರದು ಎಂದಿದ್ದಾರೆ. ಆಕ್ಸಿಜನ್ ಕೊರತೆ ನೀಗಿಸೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದ್ ಅನಗತ್ಯವಾದಂತ ನಿಯಮಗಳನ್ನು ಕೈಗೊಳ್ಳೋದಿಲ್ಲ ಎಂದರು.