ಬೆಂಗಳೂರು: ರಾಜ್ಯ ಸರ್ಕಾರ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ವೀಕೆಂಡ್ ರದ್ದು ಮಾಡಿದೆ. ತಜ್ಞರ ಸಲಹೆಯನ್ನೂ ಪಡೆದಿದೆ. ಸದ್ಯಕ್ಕೆ ಕೊರೊನಾ ಕೇಸ್ ಹೆಚ್ಚಾಗುತ್ತಿವೆ.
ಆದರೆ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. ಜನ ಈಗಲೇ ಜವಾಬ್ದಾರಿಯುತವಾಗಿಯೇ ನಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಜನ ಜವಾಬ್ದಾರಿಯುತವಾಗಿಯೇ ನಡೆದುಕೊಳ್ಳಬೇಕಿದೆ. ಕೊಂಚವೂ ಯಾಮಾರಿದ್ರೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾಗಬಹುದು.
ಆಗ ಸರ್ಕಾರಕ್ಕೆ ಕಠಿಣ ಕ್ರಮವನ್ನ ತೆಗೆದುಕೊಳ್ಳದೇ ಹೊರತು ಬೇರೆ ದಾರಿಯೇ ಉಳಿಯೋದಿಲ್ಲ ಎಂದೇ ವಿವರಿಸಿದ್ದಾರೆ ಆರೋಗ್ಯ ಸಚಿವ ಕೆ.ಸುಧಾಕರ್.