News Karnataka Kannada
Friday, May 10 2024
ರಾಯಚೂರು

ಸಿರವಾರ: ಕುಟುಂಬಸ್ಥರಿಂದಲೇ ವ್ಯಕ್ತಿ ಕೊಲೆ

ವೈದ್ಯನೋರ್ವ ಕಾಂಗ್ರೆಸ್ ಮುಖಂಡನ ಹೆಸರನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
Photo Credit : IANS

ಸಿರವಾರ : ನಿತ್ಯ ಕುಡಿದು ಮನೆಯಲ್ಲಿ ದುಡ್ಡಿಗಾಗಿ ಜಗಳವಾಡುತ್ತಿದ್ದಕ್ಕೆ ಬೇಸತ್ತ ತಾಯಿಯೇ ಕುಟುಂಬಸ್ಥರೊಂದಿಗೆ ಜೊತೆಗೂಡಿ ಮಗನನ್ನು ಕೊಲೆಗೈದ ಘಟನೆ ಪಟ್ಟಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಪಟ್ಟಣದ ಜೆ.ಅಮರೇಶ (45) ಎಂಬುವವರು ಕೊಲೆಯಾಗಿದ್ದು, ಕೊಲೆಗೆ ಕಾರಣರಾದವರು ಸ್ವತಃ ತಾಯಿ, ಅಕ್ಕ ಹಾಗೂ ಅಳಿಯ ಎಂಬುವುದು ತಿಳಿದು ಬಂದಿದೆ. ಪಟ್ಟಣದ ಖಾಸಗಿ ಬ್ಯಾಂಕ್‌ ನಲ್ಲಿ ಪಿಗ್ಮಿ ಏಜೆಂಟಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಮರೇಶನು ನಿತ್ಯದಂತೆ ಹೊರಗಡೆ ಓಡಾಡಿ ಸಾಯಂಕಾಲ ಮನೆಗೆ ವಾಪಸ್ಸಾಗಿದ್ದಾನೆ. ಪತ್ನಿ ಹಬ್ಬಕ್ಕೆ ತವರು ಮನೆಗೆ ತೆರಳಿದ್ದಳು. ರಾತ್ರಿ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ತಾಯಿ ಲಕ್ಷ್ಮೀದೇವಿ, ಅಕ್ಕ ನಿರ್ಮಲಾ ಹಾಗೂ ಅಳಿಯ ಸಂತೋಷ ಸೇರಿ ಕೊಲೆಗೈದಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಮಾನ್ವಿ ಸಿಪಿಐ ಮಹಾದೇವ ಪಂಚಮುಖೀ, ಸಿರವಾರ ಪಿಎಸ್‌ಐ ಗುರುರಾಜ ಕಟ್ಟಿಮನಿ, ಪಿಎಸ್‌ಐ ಗೀತಾಂಜಲಿ ಶಿಂಧೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಯಿಯಿಂದಲೆ ಕೊಲೆ?

ಮಗನಿಗೆ ಬುದ್ಧಿ ಹೇಳಿ ಬೇಸತ್ತ ತಾಯಿಯೇ ಮಗನ ಕೊಲೆಗೆ ಮುಂದಾಗಿರುವುದು ಅಚ್ಚರಿಯಾಗಿದೆ. ಆದರೆ ಕೊಲೆಗೆ ಮತ್ತೇನಾದರೂ ಕಾರಣಗಳಿರಬಹುದೇ ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು