ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದುಕೊಂಡಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಈಗ ಹೈದರಾಬಾದ್ ಮಹಾನಗರ ಪಾಲಿಕೆ(ಜಿಎಚ್ ಎಂಸಿ)ಯತ್ತ ದೃಷ್ಟಿಯನ್ನಿಟ್ಟಿದೆ.
ಜಿಎಚ್ ಎಂಸಿಯ ಚುನಾವಣೆಗೆ ರಾಜ್ಯದಿಂದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
ಇವರಿಬ್ಬರಿಗೆ ತೆಲುಗಿನ ಮೇಲೆ ಉತ್ತಮ ಹಿಡಿತ ಇರುವ ಕಾರಣದಿಂದಾಗಿ ಈ ಆಯ್ಕೆ ಮಾಡಲಾಗಿದೆ.
ತೆಲಂಗಾಣ ಚುನಾವಣಾ ಆಯೋಗವು ಇದುವರೆಗೆ ದಿನಾಂಕ ಪ್ರಕಟಿಸಿಲ್ಲ. 2021 ಫೆ.10ರ ತನಕ ಜಿಎಚ್ ಎಂಸಿ ಅವಧಿಯು ಪೂರ್ಣಗೊಳ್ಳಲಿದೆ.