News Karnataka Kannada
Saturday, May 04 2024
ಬೆಂಗಳೂರು ನಗರ

ಬೆಂಗಳೂರು: ಮಾಲೀಕನ ಮನೆಗೆ ನುಗ್ಗಿ ಹಣ, ಚಿನ್ನಾಭರಣ ಕದ್ದು ಜೈಲು ಸೇರಿದ ಸಹೋದರಿಯರು

Jail
Photo Credit :

ಬೆಂಗಳೂರು, ಮಾ. 06 : ನಮ್ಮ ಮನೆಯಲ್ಲಿ ನಮ್ಮ ಅಪ್ಪ ದುಡ್ಡು ಇಟ್ಟಿದ್ದಾರೆ ಎಂದು ಹದಿಮೂರು ವರ್ಷದ ಬಾಲಕ ಹೇಳಿದ ಮಾತನ್ನು ಕೇಳಿಸಿಕೊಂಡು ಚೋರ ಸಹೋದರಿಯರು ಮನೆ ಬಾಡಿಗೆಗೆ ನೀಡಿದ್ದ ಮಾಲೀಕರ ಮನೆಗೆ ಕನ್ನ ಹಾಕಿ ಜೈಲು ಅತಿಥಿಗಳಾಗಿದ್ದಾರೆ. ಸಿನಿಮಾ ಶೈಲಿಯಲ್ಲಿ ಮನೆ ಕಳ್ಳತನ ಮಾಡಿ ವಿಲಾಸಿ ಜೀವನ ಮಾಡುತ್ತಿದ್ದ ಚೋರ ಸಹೋದರಿಯರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ಸಮಯ್ಯ ತಾಜ್ (23) ನಾಜೀಮಾ ತಾಜ್, ನಾಜೀಮಾ ಗಂಡ ಅಕ್ಬರ್ ಬಂಧನಕ್ಕೆ ಒಳಗಾದವರು. ಜಯನಗರದ ಒಂದನೇ ಬ್ಲಾಕ್‌ನ ದಯಾನಂದ ನಗರ ನಿವಾಸಿ ಜಬಿ ಮತ್ತ ಹಾಜೀರಾ ದಂಪತಿ ನಡೆಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಜಬಿ ಅವರ ಮನೆ ಬಾಡಿಗೆಗೆ ಬಂದಿದ್ದ ಕಳ್ಳ ಸಹೋದರಿಯರು ತಮ್ಮ ಕೈಚಳಕ ತೋರಿ ಕೈಗೆ ಕೋಳ ತೊಡಿಸಿಕೊಂಡಿದ್ದಾರೆ.

ಜಬಿ ಮತ್ತು ಹಾಜಿರಾ ದಂಪತಿ ಮನೆಗೆ ಬಾಡಿಗೆ ಬಂದಿದ್ದ ಸಮಯ್ಯ ತಾಜ್ ಮತ್ತು ನಾಜೀಮಾ ತಾಜ್ ತನ್ನ ಗಂಡ ಸೇರಿ ಕುಟುಂಬವೇ ಮನೆಯಲ್ಲಿತ್ತು. ಹಾಜೀರಾ ಮತ್ತು ಜಬಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಹದಿಮೂರು ವರ್ಷದ ಮಗ ಹಾಗೂ ಮಗಳಿದ್ದಳು. ಮನೆಯ ಮೊದಲನೇ ಮಹಡಿಯಲ್ಲಿ ಜಬೀ ವಾಸವಾಗಿದ್ದರು. ಎರಡನೇ ಮಹಡಿಯಲ್ಲಿ ನಾಜೀಮಾ ತಾಜ್ ಕುಟುಂಬ ನೆಲೆಸಿತ್ತು. ಎದುರು ಮನೆಯಲ್ಲಿ ಸುಮಯ್ಯ ತಾಜ್ ಬಾಡಿಗೆಗೆ ವಾಸವಾಗಿದ್ದಳು.

ಜಬಿ ಮನೆಯ ಟೆರೇಸ್ ಮೇಲೆ ಹೋಗಿ ಆಟ ಆಡುವ ಸಮಯದಲ್ಲಿ ನಮ್ಮ ಮನೆಯಲ್ಲಿ ಹಣವಿದೆ ಎಂದು ಹೇಳಿಕೊಂಡಿದ್ದ. ಇದನ್ನು ಕೇಳಿಸಿಕೊಂಡ ನಾಜಿಮಾ ತಾಜ್ ಹಣ ಎಗರಿಸಲು ಬಲೆ ಎಣೆದಿದ್ದಳು. ಜಬಿ ಲಾರಿ ಮಾರಿ ಮಗಳ ಮದುವೆ ಮಾಡಲು ನಾಲ್ಕು ಲಕ್ಷ ನಗದು ಹಣ ಮತ್ತು ಚಿನ್ನಾಭರಣ ಮಾಡಿಸಿಟ್ಟಿದ್ದ. ಇದನ್ನು ತಿಳಿದುಕೊಂಡ ನಾಜೀಮಾ ತಾಜ್ ಮನೆಗೆ ಕನ್ನ ಹಾಕಲು ಪ್ಲಾನ್ ರೂಪಿಸಿ ಪಕ್ಕದ ಮನೆಯಲ್ಲಿದ್ದ ಸಹೋದರಿ ಸುಮಯ್ಯ ತಾಜ್‌ಗೆ ವಿಚಾರ ತಿಳಿಸಿ ಎಲ್ಲರ ಸೇರಿ ಮನೆಗೆ ಸ್ಕೆಚ್ ಹಾಕಿದ್ದಾರೆ.

ನಾಜಿಮಾ ತಾಜ್ ಮನೆಗೆ ಅಡ್ಡ ಕೂತು ಯಾರು ಮನೆಯ ಮೇಲಕ್ಕೆ ಹೋಗದಂತೆ ಅಡ್ಡ ಕೂತಿದ್ದರು. ಈ ವೇಳೆ ಸಮಯ್ಯ ತಾಜ್ ಮತ್ತು ಅಕ್ಬರ್ ಮನೆಯ ಬೀರು ಬೀಗ ಒಡೆದು 2.34 ಲಕ್ಷ ರೂ. ಮೌಲ್ಯದ 58 ಗ್ರಾಂ ಚಿನ್ನಾಭರಣ, ಹತ್ತು ಲಕ್ಷ ರೂ. ನಗದು ಕದ್ದು ಫೆ. 19 ರಂದು ಎಸ್ಕೇಪ್ ಆಗಿದ್ದರು.

ಮನೆ ಮಾಲಕಿ ಹಾಜಿರಾ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಈ ವೇಳೆ ಇಬ್ಬರ ಮೇಲೆ ಅನುಮಾನಗೊಂಡು ಸಿಸಿಟಿವಿ ದೃಶ್ಯ ನೋಡಿದಾಗ ಚೋರ ಸಹೋದರಿಯರ ಚಲನವಲನ ಗಮಿನಿಸಿದಾಗ ಕೈಚಳಕ ತೋರಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪರಾರಿಯಾಗಿದ್ದ ಚೋರ ಸಹೋದರಿಯರ ಮೂಲ ಪತ್ತೆ ಮಾಡಿದಾಗ, ಕದ್ದ ಹಣದಲ್ಲಿ ಅರ್ಧದಷ್ಟು ಆಗಲೇ ವೆಚ್ಚ ಮಾಡಿ ಶೋಕಿ ಜೀವನ ನಡೆಸಿದ್ದರು. ಹದಿನಾಲ್ಕು ಚೂಡಿದಾರ್ ಸೇರಿದಂತೆ ಬೇಕಾದಷ್ಟು ಬಟ್ಟೆ ಖರೀದಿ ಮಾಡಿದ್ದರು. ಬಂಧಿತರಿಂದ ನಾಲ್ಕು ಲಕ್ಷ ರೂ. ನಗದು, ಮತ್ತು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ಎರಡೇ ದಿನಕ್ಕೆ ಮೋಜು ಮಾಡಿದ್ದು, ಸಿದ್ದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು