ಬೆಂಗಳೂರು: ರಾಜ್ಯದ ಖಜಾನೆಯು ಭರಿದಾಗುತ್ತಿದ್ದು, ಮೂಲಸೌಕರ್ಯಗಳಿಗೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ ಕಾಣುತ್ತಿದೆ ಎಂದು ವರದಿಗಳು ಹೇಳಿವೆ.
ಸಚಿವರು, ಶಾಸಕರು ಹಾಗೂ ನೌಕರರ ಸಂಬಳ-ಸಾರಿಗೆ, ಸ್ಥಳೀಯ ಸಂಸ್ಥೆಗಳಿಗೆ ನೀಡುವ ಆಡಳಿತಾತ್ಮಕ ಅನುದಾನ ಸಹಿತ ಸರ್ಕಾರ ಮಾಡುತ್ತಿರುವ ಬದ್ಧ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನದ ಕೊರತೆ ಕಾಣಿಸುತ್ತಿದೆ.
ಕೆಲವೊಂದು ಯೋಜನೆಗಳು ನಿಗದಿತ ಸಮಯದಲ್ಲಿ ಮುಗಿಯದೆ ಇರುವ ಹಿನ್ನೆಲೆಯಲ್ಲಿ ವೆಚ್ಚವು ದುಪ್ಪಟ್ಟಾಗಿದೆ. 2017-18ರಲ್ಲಿ ಒಟ್ಟು ಸಂಪನ್ಮೂಲದ ಶೇ.81ರಷ್ಟು ಪ್ರಮಾಣ ಬದ್ಧ ವೆಚ್ಚಗಳಿಗಾಗಿಯೇ ವಿನಿಯೋಗವಾಗಿದೆ.