ಬೆಂಗಳೂರು : ನಗರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಯಿಂದ ಸಂಭವಿಸಲಿದ್ದ ಭಾರೀ ದುರಂತ ಕೊನೆಯ ಕ್ಷಣದಲ್ಲಿ ತಪ್ಪಿದೆ . ಮಲ್ಲೇಶ್ವರಂನಲ್ಲಿರುವ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ರಾತ್ರಿ 11.30 ರ ಹೊತ್ತಿಗೆ ಆಕ್ಸಿಜನ್ ಕೊರತೆ ಎದುರಾಗಿ ಅನೇಕ ರೋಗಿಗಳ ಪ್ರಾಣ ಆಪಾಯದಲ್ಲಿ ಸಿಲುತಿತ್ತು.
ಹೌದು, ಆಸ್ಪತ್ರೆಯಲ್ಲಿ ಆಕ್ಸಿಜನ್ ನಿರ್ವಹಣೆಯ ಹೊಣೆ ಹೊತ್ತಿದ್ದ ವೈದ್ಯ ರೇಣುಕಾ ಪ್ರಸಾದ್ , ತಕ್ಷಣ ಇದನ್ನು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ಗಮನಕ್ಕೆ ತಂದರು . ರಾತ್ರಿ 11 ಗಂಟೆಗೆ ಬಳ್ಳಾರಿಯಿಂದ ಆಗಮಿಸಿಬೇಕಿದ್ದ ಆಕ್ಸಿಜನ್ ಕೆ . ಸಿ.ಜನರಲ್ ಆಸ್ಪತ್ರೆಗೆ ತಲುಪಿರಲಿಲ್ಲ . ಇದರಿಂದ ಆತಂಕ ನಿರ್ಮಾಣವಾಗಿತ್ತು .
ಬಳಿಕ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮತ್ತು ಸಚಿವರು ನಗರದ ಹೊರವಲಯದಿಂದ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡುವಲ್ಲಿ ಯಶಸ್ವಿಯಾದರು . 200 ರೋಗಿಗಳು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಮೇಲೆ ಅವಲಂಬಿತರಾಗಿದ್ದಾರೆ . ಅವರ ಪ್ರಾಣ ಆಕ್ಸಿಜನ್ ಪೂರೈಕೆ ಮೇಲೆ ನಿಂತಿದೆ ಎಂದು ವರದಿಗಳು ತಿಳಿಸಿವೆ.