News Karnataka Kannada
Tuesday, May 07 2024
ಕ್ರೀಡೆ

ಬಯೋ ಬಬಲ್ ಒಳಗಡೆ ಕೋವಿಡ್ ಹೇಗೆ ಬಂತು ಅನ್ನುವುದು ಆಶ್ಚರ್ಯಕರ ಸಂಗತಿ: ಸೌರವ್ ಗಂಗೂಲಿ

Photo Credit :

ಬಯೋ ಬಬಲ್ ಒಳಗಡೆ ಕೋವಿಡ್ ಹೇಗೆ ಬಂತು ಅನ್ನುವುದು ಆಶ್ಚರ್ಯಕರ ಸಂಗತಿ: ಸೌರವ್ ಗಂಗೂಲಿ

ಮುಂಬೈ: ಕೋವಿಡ್ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ಅಮಾನತಾಗಿದೆ. ಮುಂದೆ ನಡೆಯೂವುದು ಅನುಮಾನ ಎನ್ನಲಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೇ ಮೊದಲ ಬಾರಿಗೆ ಈ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.

ಐಪಿಎಲ್ ಆಟಗಾರರ ಕಠಿಣ ಬಯೋ ಬಬಲ್ ನ ಒಳಗೆ ಇದ್ದರೂ ಕೋವಿಡ್ ವೈರಸ್ ಹೇಗೆ ಹೊಕ್ಕಿತೆನ್ನುವುದನ್ನು ಹೇಳುವುದೇ ಕಷ್ಟ. ನಮಗೆ ಬಂದಿರುವ ಪ್ರಾಥಮಿಕ ವರದಿಯ ಪ್ರಕಾರ ಬಬಲ್ ಉಲ್ಲಂಘನೆ ಮಾಡಿರುವ ಯಾವುದೇ ಪ್ರಸಂಗ ನಡೆದಿಲ್ಲ ಎಂದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ವೃದ್ಧಮಾನ್ ಸಾಹ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾದ ಕೆಲವೇ ಗಂಟೆಗಳ ಬಳಿಕ ಕೂಟವನ್ನು ಅಮಾನತು ಮಾಡುವ ನಿರ್ಧಾರ ಪ್ರಕಟಿಸಲಾಗಿದೆ.

ಇದಕ್ಕೂ ಮೊದಲು ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಸಿಎಸ್ ಕೆ ಕೋಚ್ ಬಾಲಾಜಿ ಗೆ ಕೋವಿಡ್ ಪಾಸಿಟಿವ್ ಆಗಿತ್ತು.

ಮುಂದೆ ಐಪಿಎಲ್ ಮುಂದುವರಿಸುವ ಬಗ್ಗೆ ಮಾತನಾಡಿದ ಗಂಗೂಲಿ, ಇದರ ಬಗ್ಗೆ ಮುಂದೆ ಯೋಚನೆ ಮಾಡುತ್ತೇವೆ, ಈಗಲೇ ಹೇಳುವುದು ಕಷ್ಟ ಎಂದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು