ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಡಿ.ಕೆ.ಶಿವಕುಮಾರ್ ಸಹಿತ ಸುಮಾರು 11 ಮಂದಿ ವಿರುದ್ಧ ಸಿಬಿಐ ಸರ್ಚ್ ವಾರಂಟ್ ಕೋರ್ಟ್ ನಿಂದ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುರೇಶ್ ಮತ್ತು ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೇಲೆ ಆರೋಪ ಮಾಡಿದರು.
ತಮ್ಮನ್ನು ಈಗ ಟಾರ್ಗೆಟ್ ಮಾಡಲಾಗುತ್ತಿದೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದಿರುವುದು ತಿಳಿದುಬಂದಿದೆ ಎಂದು ಅವರಿಬ್ಬರು ತಿಳಿಸಿದರು.
ರಾಜಕೀಯ ದುರುದ್ದೇಶದಿಂದಾಗಿ ಹೀಗೆ ಮಾಡಲಾಗುತ್ತಿದೆ. ನಮಗೆ ಹಾಗೂ ನಮ್ಮ ಬಂಧುಗಳಿಗೆ ಹಿಂಸೆ ಕೊಡಲು ಬಿಜೆಪಿ ಈ ರೀತಿಯ ಕಾರ್ಯಕ್ಕೆ ಮುಂದಾಗಿದೆ ಎಂದು ಅವರು ತಿಳಿಸಿದರು.