News Karnataka Kannada
Saturday, April 27 2024
ಬೆಂಗಳೂರು ನಗರ

ಕ್ರೈಸ್ತ ಸಮುದಾಯದ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಮನವಿ

Bengluru
Photo Credit :

ಬೆಂಗಳೂರು:  ಕ್ರೈಸ್ತ ಸಮುದಾಯದ ವಿರುದ್ಧ ಕೇಳಿಬರುತ್ತಿರುವ ಆಧಾರರಹಿತ ಆರೋಪಗಳ ಬಗ್ಗೆ ಮತ್ತು ಸಮುದಾಯದ  ವಿರುದ್ಧ ನಡೆಯುತ್ತಿರುವ ದೌರ್ಜನ್ಯ , ಹಲ್ಲೆ , ವಿಗ್ರಹಗಳ ಧ್ವಂಸ ಬೆದರಿಕೆಗಳ ಬಗ್ಗೆ ತನಿಖೆ ಮಾಡಲು ನಿವೃತ್ತ ನ್ಯಾಯಾಧೀಶರಿಗೆ ಅಥವಾ ಉನ್ನತ ಮಟ್ಟದ ಸಮಿತಿಗೆ ವಹಿಸಲು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹ್ಯಾರಿ ಡಿಸೋಜ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ .

ಸ್ವಾತಂತ್ರ್ಯಪೂರ್ವ ಮತ್ತು ನಂತರ ಈ ದೇಶ ಕಟ್ಟಲು ದೇಶದ ಜನತೆಗೆ ಶಿಕ್ಷಣ , ಆರೋಗ್ಯ , ಸಾಮಾಜಿಕ ಕ್ಷೇತ್ರದಲ್ಲಿ ಕ್ರೈಸ್ತ  ಸಮುದಾಯ ನೀಡಿರುವ ಸೇವೆಯನ್ನು ಇಂದಿನ ಯುವಜನತೆ ಮರೆತು ತಮ್ಮ ಸ್ವಾರ್ಥಕ್ಕಾಗಿ ತಮ್ಮ ಲಾಭಕ್ಕಾಗಿ ಕ್ರೈಸ್ತ ಸಮುದಾಯದವರ ವಿರುದ್ಧ ದಾಳಿ , ಹಲ್ಲೆಗಳನ್ನು ಮಾಡುತ್ತಿದ್ದಾರೆ ಹಳ್ಳಿ , ಗುಡ್ಡಗಾಡು ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿ ಸೇವೆ ನೀಡಿರುವ ಕ್ರೈಸ್ತ ಸಮುದಾಯಕ್ಕೆ ಇಂದು ಅತಂತ್ರ ಸ್ಥಿತಿ ನಿರ್ಮಾಣ ವಾಗಿದ್ದು ಕ್ರೈಸ್ತ ಸಮುದಾಯ ಭಯದ ವಾತಾವರಣವನ್ನು ಎದುರಿಸುತ್ತಿದ್ದಾರೆ . ಕರ್ನಾಟಕ ಸರ್ಕಾರದ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಕೇವಲ 11.30 ಲಕ್ಷ ಜನಸಂಖ್ಯೆ , ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಸುಮಾರು ಶೇ .6.5 ರಷ್ಟು ಜನಸಂಖ್ಯೆ ಇತ್ತು . ಆದರೆ ಇಂದು ಶೇ .2.5 ರಷ್ಟು ಆಗಿದೆ . ಬಿರಿಯಾನಿ ನೀಡಿ ಮತಾಂತರ ಮಾಡುತ್ತಿದ್ದಾರೆ .

ಆಸೆ ಆಮಿಷಗಳನ್ನು ಹಣ ನೀಡಿ ಮತಾಂತರ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹಾಕುತ್ತಾ ಆರೋಪಗಳನ್ನು ಮಾಡುತ್ತಿರುವ  ನಾಟಕೀಯ ಆರ್ಭಟಗಳನ್ನು ನೋಡಿದರೆ ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಜನಸಂಖ್ಯೆ 25 ರಿಂದ 35 ಲಕ್ಷ ಆಗಬೇಕಾಗಿತ್ತು . ಮತಾಂತರ ಆಗಿದ್ದಲ್ಲಿ ಸರ್ಕಾರದಲ್ಲಿ ದಾಖಲೆಗಳಲ್ಲಿ ದಾಖಲಾಗುತ್ತಿತ್ತು . ಆ ದಾಖಲೆಗಳನ್ನು ಬಿಡುಗಡೆ ಮಾಡಬೇಕು . ಮತಾಂತರ ಆಗದೇ ಇದ್ದಾಗ ಮತಾಂತರೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ . ಆರೋಪ ಮಾಡಿ ತಮ್ಮ ಸ್ವಾರ್ಥಕ್ಕೆ ಗೊಂದಲ ಸೃಷ್ಟಿಸುವವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುವ ಬದಲು ಅವರಿಗೆ ರಾಜ ಮರ್ಯಾದೆಯನ್ನು ನೀಡಿ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡುತ್ತಿದ್ದೇವೆ . ಇದರಿಂದ ಪ್ರೇರಿತರಾಗಿ ಇವರು ಸರ್ಕಾರ ತಮಗೆ ಏನು ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಕಾನೂನಿಗೆ ಹೆದರದೆ ಒಂದೊಂದು ಗೊಂದಲಗಳನ್ನು ಸೃಷ್ಠಿಸಿ ಗಲಭೆಗಳನ್ನು ಮಾಡುತ್ತಿದ್ದಾರೆ . ಮತಾಂತರಕ್ಕೂ ಮತ ಪ್ರಚಾರಕ್ಕೂ ಬಹಳ ವ್ಯತ್ಯಾಸಗಳಿವೆ . ಮತ ಪ್ರಚಾರ ಅವರವರ ವೈಯಕ್ತಿಕ ವಿಷಯ ಮತ ಪ್ರಚಾರವನ್ನು ಮತಾಂತರ ಎಂದು ಹೇಳಲು ಸಾಧ್ಯವಿಲ್ಲ . ಯಾರದೋ ಮನೆಯಲ್ಲಿ ಬರ್ತಡೆ ಪಾರ್ಟಿ ಅಥವಾ ಯಾವುದೋ ಶುಭ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾಗ , ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ನೀವು ಮತಾಂತರ ಮಾಡುತ್ತಿದ್ದೀರಾ ಎಂದು ಗಲಭೆ ಎಬ್ಬಿಸಿ ಕಾನೂನನ್ನು ಕೈಗೆ ತೆಗೆದುಕೊಂಡು ಅವರನ್ನು ಬೆದರಿಸಿ ಕೆಲವೊಂದು ಕಡೆ ಅವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ತಪ್ಪು ಮಾಹಿತಿ ನೀಡಿ ದೂರು ನೀಡುತ್ತಾರೆ . ಪೊಲೀಸರು ಇವರಿಗೆ ಹೆದರಿ ಯಾವುದೇ ವಿಚಾರಣೆ ಮಾಡದೆ ನಾನಾ ಸೆಕ್ಷನ್‌ಗಳನ್ನು ಹಾಕಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು