ಬೆಳ್ತಂಗಡಿ: ಕಾರಣಿಕ ಕ್ಷೇತ್ರವಾಗಿರುವ ಅಳದಂಗಡಿ ಶ್ರಿ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಂಭ್ರಮವು 2023 ರ ಫೆ.3 ರಿಂದ 9 ರವರೆಗೆ ನಡೆಯಲಿದೆ.
ಬ್ರಹ್ಮಕಲಶೋತ್ಸವದ ದಿನಾಂಕ ನಿಗದಿ ಮಾಡುವ ಬಗ್ಗೆ ಪ್ರಮುಖರ ಸಭೆ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರ ಅಧ್ಯಕ್ಷತೆಯಲ್ಲಿ ಮೇ 8 ರಂದು ಬಾಲಾಲಯದ ವಠಾರದಲ್ಲಿ ಸಭೆ ನಡೆದು ದಿನಾಂಕ ಪ್ರಕಟಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ ಇದುವರೆಗಿನ ಕಾಮಗಾರಿಗಳ ಬಗ್ಗೆ ವಿವರಿಸಿ ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಚಿಂತನೆ ನಡೆದು ಮುಂದಿನವರ್ಷದ ಫೆ.3 ರಿಂದ 9 ರಂದು ನಡೆಸುವುದೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಫೆ.5 ರಂದು ಪ್ರತಿಷ್ಠೆ ಹಾಗೂ ಫೆ. 9 ರಂದು ಬ್ರಹ್ಮಕಲಶೋತ್ಸವ ನಡೆಸುವುದೆಂದು ಸಭೆಗೆ ತಿಳಿಸಲಾಯಿತು.
ವೇದಿಕೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮನಾಥ ಮಯ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳ್ತೆದಾರ ಶಿವಪ್ರಸಾದ ಅಜಿಲ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್, ಉಪಾಧ್ಯಕ್ಷ ಹರೀಶ್ ಆಚಾರ್ಯ, ಡಾ ಎನ್ ಎಂ.ತುಳುಪುಳೆ, ಹೇಮಂತ ರಾವ್, ರಾಜಶೇಖರ ಶೆಟ್ಟಿ, ಪಿ.ಡಿ.ಒ.ಪಿ.ಹೆಚ್ ಪ್ರಕಾಶ್ ಶೆಟ್ಟಿ, ಹಿರಿಯರಾದ ಕೆ.ವಸಂತ ಸಾಲ್ಯಾನ್, ಧರ್ಣಪ್ಪ ಪೂಜಾರಿ, ಸೋಮನಾಥ ಬಂಗೇರ,ಜಗನ್ನಾಥ ಶೆಟ್ಟಿ,ಸಂತೋಷ್ ಕುಮಾರ್,ಜಗದೀಶ ಹೆಗ್ಡೆ, ವಿಶ್ವನಾಥ ಹೊಳ್ಳ, ವಿಜಯ ಕುಮಾರ್ ಜೈನ್, ಸಂಜೀವ ಪೂಜಾರಿ ಕೊಡಂಗೆ, ನಿರಂಜನ ಜೋಶಿ,ಸುಂದರ ಆಚಾರ್ಯ, ಕೊರಗಪ್ಪ ಪೂಜಾರಿ, ಕೋಶಾಧಿಕಾರಿ ಅನಿಲ್ ಮಾಳಿಗೆ, ಬಾಬು ಪೂಜಾರಿ,ಯಶೋಧರ ಸುವರ್ಣ, ಪೇಮ ಭಟ್,ದೇವಿಪ್ರಸಾದ್ , ನಾರಾಯಣ ರಾವ್, ಶಶಿಧರ ಶೆಟ್ಟಿ,ಸದಾನಂದ ಬಿ,ಬೂಬ ಮೂಲ್ಯ, ಶ್ರೀಧರ ಪೂಜಾರಿ, ಜಿನ್ನಪ್ಪ ಶೆಟ್ಟಿ ,ಮಂಜುನಾಥ ಆಚಾರ್ಯ, ಶ್ರೀರಂಗಮಯ್ಯ, ದಿನೇಶ್ ರಾವ್,ಪ್ರಸನ್ನ ಮಯ್ಯ,ಜಿನ್ನಪ್ಪ ಶೆಟ್ಟಿ,ಸೋಮನಾಥ ಸಾಲ್ಯಾನ್, ದೀಪಕ್ ನಾಲ್ಕೂರು, ಶಿವಭಟ್, ಪ್ರಶಾಂತ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಹರೀಶ್ ಆಚಾರ್ಯ ಸುಪ್ರೀತ್ ಜೈನ್ ,ಓಂಕಾರ್ ಜೈನ್, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ದೇವಳ ವ್ಯವಸ್ಥಾಪನಾ ಸಮಿತಿ ಎಂ.ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ಮೋಹನ್ ಎ. ದಾಸ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.