ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಸಿಕ್ಕಿದರೂ ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರಿಸಿದ್ದ ಮತ್ತು ಕಾಂಗ್ರೆಸ್ ನಾಯಕರ ಕೈಗೆ ಸಿಗದೆ ಇದ್ದ ಅಂಬರೀಷ್ ಅವರು ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ಭೇಟಿಯು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿರುವ ರೇಸ್ ಕೋರ್ಸ್ ರಸ್ತೆಯ ಅಂಬಿ ಅಪಾರ್ಟ್ ಮೆಂಟ್ ಗೆ ಕುಮಾರಸ್ವಾಮಿ ತೆರಳಿ ಮಾತುಕತೆ ನಡೆಸಿರುವುದಾಗಿ ವರದಿಗಳು ಹೇಳಿವೆ.
ಮುಂದಿನ ದಿನಗಳಲ್ಲಿ ಈ ಭೇಟಿಯು ಯಾವ ಸ್ವರೂಪ ಪಡೆದುಕೊಳ್ಳುವುದು ಎಂದು ಕಾದುನೋಡಬೇಕಾಗಿದೆ.