ಬೆಂಗಳೂರು: ಗುರುವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತನ್ನ ನಿವಾಸದಲ್ಲಿ ಕಾಂಗ್ರೆಸ್ ಸಚಿವರಿಗೆ ಉಪಾಹಾರ ಕೂಟವನ್ನು ಹಮ್ಮಿಕೊಂಡಿದ್ದು ಇದರಲ್ಲಿ ರಮೇಶ ಜಾರಕಿಹೊಳಿ ಮತ್ತು ರಾಜಶೇಖರ್ ಪಾಟೀಲ ಹೊರತು ಪಡಿಸಿದರೆ ಎಲ್ಲ ಸಚಿವರೂ ಭಾಗಿಯಾಗಿದ್ದರು.
ಕ್ರೆಸೆಂಟ್ ರಸ್ತೆಯಲ್ಲಿರುವ ಶಿವಕುಮಾರ್ ಅವರ ಸರ್ಕಾರಿ ನಿವಾಸದಲ್ಲಿ ಉಪಾಹಾರ ಕೂಟ ಹಮ್ಮಿಕೊಂಡಿದ್ದು ಈ ವೇಳೆ ರಾಜಕೀಯ ಬೆಳವಣಿಗೆಯ ಕುರಿತು ಚರ್ಚೆಗಳು ನಡೆದಿವೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಅನುಪಸ್ಥಿತಿಯ ಕುರಿತು ಸುದ್ದಿಗಾರರು ಡಿಕೆಶಿಯನ್ನು ಪ್ರಶ್ನಿಸಿದಾಗ, ಸಿದ್ದರಾಮಯ್ಯ ಅವರನ್ನು ಕರೆಬೇಕೆನ್ನುವ ಸಭೆಗೆ ಕರೆಯುತ್ತೇವೆ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಈ ಸಭೆಯ ಕುರಿತು ಅವರ ಮನೆಯಲ್ಲೇ ನಿರ್ಧಾರಿಸಿದ್ದು ಅವರೇ ಸಲಹೆ ಸೂಚನೆಯನ್ನು ನೀಡಿದ್ದು ಎಂದಿದ್ದಾರೆ.