ಬೆಂಗಳೂರು: ದೇಶ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿರುವಂತಹ ರಾಜ್ಯದ ಹಲವಾರು ಮಂದಿ ಶಿಕ್ಷಣ ತಜ್ಞರು ಇದನ್ನು ಬೆಂಬಲಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಕಾಯ್ದೆ 2019ನ್ನು ಬೆಂಬಲಿಸಿ ರಾಜ್ಯದ ಹಲವಾರು ಮಂದಿ ಶಿಕ್ಷಣ ತಜ್ಞರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವರು.
ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡಿರುವಂತಹ ಪತ್ರದ ಪ್ರಕಾರ ಬೆಂಗಳೂರಿನ ಐಐಎಸ್ ಸಿಯ ಡಾ. ನವೀನ್ ಬಿ.ಆರ್., ಕನಿಷ್ಕ ಶರ್ಮಾ, ವಿಶ್ವನಾಥ್, ಬಿ. ಗಿರೀಶ, ಲೇಖಕಿ ರಕ್ಷಾ ಆರ್, ಅಂಬೇಡ್ಕರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಣಿ ಎಂಟಿ, ಸೌರವ್ ದೀಕ್ಷಿತ್ ಮೊದಲಾದವರು ಸುಮಾರು 26 ಪುಟಗಳ ಪತ್ರಕ್ಕೆ ಸಹಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.