ಬೆಂಗಳೂರು: ಕೇಂದ್ರ ನಾಗರಿಕ ಸೇವಾ ಆಯೋಗ(ಯುಪಿಎಸ್ ಸಿ) ಪರೀಕ್ಷೆಯಲ್ಲಿ ರಾಜ್ಯಕ್ಕೆ ರಾಹುಲ್ ಶರಣಪ್ಪ ಸಂಕನೂರು ಮೊದಲಿಗರಾಗಿದ್ದಾರೆ.
ರಾಜ್ಯದ ಸುಮಾರು 24 ಮಂದಿ ಅಭ್ಯರ್ಥಿಗಳು ಈ ಸಾಲಿಗೆ ರಾಜ್ಯದಿಂದ ಉತ್ತೀರ್ಣರಾಗಿದ್ದಾರೆ. ರಾಹುಲ್ ಶರಣಪ್ಪ ಅವರು ದೇಶಕ್ಕೆ 17ನೇ ಸ್ಥಾನ ಪಡೆದಿದ್ದಾರೆ.
ಯುಪಿಎಸ್ ಸಿಯಲ್ಲಿ ಮುಂಬಯಿ ಐಐಟಿಯ ಬಿಟೆಕ್ ಪದವೀಧರ ಕನಿಷ್ಕ್ ಕಟಾರಿಯಾ ಮೊದಲ ರ್ಯಾಂಕ್ ಪಡೆದಿದ್ದಾರೆ. ಐದನೇ ಸ್ಥಾನ ಪಡೆದಿರುವ ಸೃಷ್ಟಿ ಜಯಂತ್ ದೇಶ್ ಮುಖ್ ಅವರು ಮಹಿಳೆಯರಲ್ಲಿ ದೇಶಕ್ಕೆ ಮೊದಲ ಸ್ಥಾನ ಪಡೆದಿರುವರು.
ದೇಶದಲ್ಲಿ ಸುಮಾರು ಐದು ಲಕ್ಷ ಅಭ್ಯರ್ಥಿಗಳು ಪ್ರಿಲಿಮಿನರಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 10.648 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ತೇರ್ಗಡೆಯಾಗಿದ್ದರು. ಇದರಲ್ಲಿ ಅಂತಿಮವಾಗಿ 759 ಮಂದಿ ಜನ ಕೇಂದ್ರ ನಾಗರಿಕ ಸೇವೆಗೆ ನೇಮಕವಾಗಿದ್ದರು.