ಬೆಂಗಳೂರು: ಬಡವರ ಹಸಿವು ನೀಗಿಸುವ ಸಲುವಾಗಿ ತಂದ ಇಂದಿರಾ ಕ್ಯಾಂಟೀನ್ ಉಳ್ಳವರ ಪಾಲಾಗುತ್ತಿದ್ದು, ಇದರ ಫಲಾನುಭವಿಗಳಾಗ ಬೇಕಾದ ನೈಜ ಬಡವರು ಹೊರಗುಳಿಯುವಂತಾಗಿದೆ.
ನಗರದಲ್ಲಿರುವ ಕೂಲಿಕಾರ್ಮಿಕರು, ಆಟೋ ಚಾಲಕರು, ಇನ್ನಿತರ ಕೆಲಸ ಕಾರ್ಯ ಮಾಡುವ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆಯಾದರೂ ಇದರ ಪ್ರಯೋಜನವನ್ನು ಬಡವರಿಗಿಂತ ದೊಡ್ಡವರೇ ಪಡೆದುಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.ಇದೀಗ ಬೆಂಗಳೂರಿನಲ್ಲಿ 71 ಇಂದಿರಾ ಕ್ಯಾಂಟೀನ್ಗಳು ಬೆಳಗ್ಗೆ 7ರಿಂದ 10ರವರೆಗೆ 5ರೂ. ದರದಲ್ಲಿ ಇಡ್ಲಿ, ರೈಸ್ಬಾತ್, ಖಾರಾಬಾತ್, ಮಧ್ಯಾಹ್ನ ಮತ್ತು ರಾತ್ರಿ 10ರೂ. ದರದಲ್ಲಿ ಅನ್ನ-ಸಾಂಬಾರ್ ವಿತರಣೆ ಮಾಡುತ್ತಿದ್ದು ಇದನ್ನು ಸಕರ್ಾರಿ ನೌಕರರು ಸೇರಿದಂತೆ ಆಥರ್ಿಕವಾಗಿ ಸಬಲರಾಗಿರುವವರೇ ಉಪಯೋಗಿಸಿಕೊಳ್ಳುತ್ತಿದ್ದು, ಬಡವರು ಹೊರಗುಳಿಯುವಂತಾಗಿದೆ.
ನಗರದಲ್ಲಿರುವ ಇಂದಿರಾ ಕ್ಯಾಂಟೀನ್ಗಳಿಗೊಂದು ಸುತ್ತು ಹೊಡೆದರೆ ಇದನ್ನು ಉಪಯೋಗಿಸಿಕೊಳ್ಳುತ್ತಿರುವವರಲ್ಲಿ ಯಾರೆಲ್ಲ ಇದ್ದಾರೆ. ನಿಜವಾಗಿಯೂ ಬಡವರು ಮಾತ್ರ ಇದನ್ನು ಉಪಯೋಗಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ನಮ್ಮಲ್ಲಿ ಸುಳಿಯುತ್ತದೆ. ಬೆಳಗ್ಗೆ ವಾಯು ವಿವಾಹರಕ್ಕೆ ಬರುವವರು, ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಹಿಂದಿರುಗುವವರು ಕಾರು, ಇಲ್ಲವೇ ದ್ವಿಚಕ್ರ ವಾಹನದಲ್ಲಿ ಬಂದು ತಿಂಡಿ ತಿನ್ನುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಒಂದು ದಿನಕ್ಕೆ 300 ಮಂದಿಗೆ ಮಾತ್ರ ತಿಂಡಿ, ಆಹಾರ ನೀಡಲಾಗುತ್ತದೆ. ಹೀಗಾಗಿ ಮೊದಲು ಬಂದವರಿಗೆ ಆದ್ಯತೆ ಎಂಬಂತೆ ಯಾರು ಬರುತ್ತಾರೋ ಅವರಿಗೆ ನೀಡಲೇ ಬೇಕಾಗುತ್ತದೆ. ಜತೆಗೆ ಕ್ಯಾಂಟೀನ್ ಸಿಬ್ಬಂದಿ ಬಡವರು, ಶ್ರೀಮಂತರು ಎಂದು ಪರಿಗಣಿಸಿ ನೀಡುವಂತೆಯೂ ಇಲ್ಲ. ಈ ಎಲ್ಲ ಕಾರಣಗಳು ಒಂದಷ್ಟು ಗೊಂದಲಗಳಿಗೆ ಕಾರಣವಾಗಿದೆ.
ಬೆಳಗ್ಗೆ ಕ್ಯಾಂಟೀನ್ ಬಾಗಿಲು ತೆರೆಯುವುದಕ್ಕೂ ಮುನ್ನವೇ ವಾಯು ವಿಹಾರಕ್ಕೆ ಬರುವ ಅನೇಕ ಮಂದಿ ಸ್ಥಿತಿವಂತರು ತಿಂಡಿ ತಿನ್ನಲು ಸರತಿ ಸಾಲಿನಲ್ಲಿ ನಿಲ್ಲುವುದು ಕಂಡು ಬರುತ್ತಿದೆ. ಆದ್ದರಿಂದ ಇದಕ್ಕೆ ಯಾವುದಾದರೂ ಒಂದು ರೀತಿಯ ಗುರುತಿನ ವ್ಯವಸ್ಥೆ ಮಾಡಬೇಕು. ಜತೆಗೆ ಉಳ್ಳವರು ಬಡವರ ಹಿತದೃಷ್ಠಿಯಿಂದ ಅದನ್ನು ಉಪಯೋಗಿಸದೆ ಬಿಟ್ಟುಕೊಡಬೇಕು. ಇಲ್ಲದೆ ಹೋದರೆ ಬಡವರ ಹಿತ ದೃಷ್ಟಿಯಿಂದ ತರಲಾದ ಯೋಜನೆ ನೈಜ ಫಲಾನುಭವಿಗೆ ಸಿಗದೆ ಹಳ್ಳ ಹಿಡಿಯುವುದರಲ್ಲಿ ಸಂಶಯವಿಲ್ಲ.