ಬೆಂಗಳೂರು: ವಿಧಾನಸಭೆಯ 222ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78 ಹಾಗೂ ಜೆಡಿಎಸ್ 38 ಸ್ಥಾನ ಗೆದ್ದು ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೆ ಅತಂತ್ರವಾಗಿತ್ತು. ಈ ನಡುವೆ ಸಿಎಂ ಗದ್ದುಗೆಯನ್ನು ಏರಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ಶುಕ್ರವಾರ ಸಂಜೆ 4ಕ್ಕೆ ಗಡುವನ್ನು ನೀಡಿತ್ತು. ಈ ನಡುವೆ ಕಾಂಗ್ರೆಸ್ ವ ಹಾಗೂ ಜೆಡಿಎಸ್ ತಮ್ಮ ಶಾಸಕರನ್ನು ಬಿಜೆಪಿ ಆಮಿಷದಿಂದ ಪಾರು ಮಾಡಲು ಹೈದರಾಬಾದ್ ಗೆ ಕರೆದೊಯ್ದಿದ್ದರು.
ಇಂದು ಕಲಾಪ ಹಿನ್ನೆಲೆ ಶಾಸಕರನ್ನು ಮತ್ತೇ ಬೆಂಗಳೂರಿಗೆ ಆಗಿಸಿದ್ದಾರೆ. ಇದೀಗ ಸದನದಲ್ಲಿ ಕಲಾಪ ಆರಂಭವಾಗಿದ್ದು ಕಾಂಗ್ರೆಸ್ ನ 78 ಶಾಸಕರ ಪೈಕಿ 76 ಮಂದಿ ಹಾಜರಾಗಿದ್ದು ಇಬ್ಬರು ಶಾಸಕರು ನಾಪತ್ತೆಯಾಗಿದ್ದಾರೆ. ಜೆಡಿಎಸ್ 38 ಶಾಸಕರಲ್ಲಿ 38ಮಂದಿ ಹಾಗೂ ಬಿಜೆಪಿಯ 104 ಶಾಸಕರಲ್ಲಿ ಎಲ್ಲರೂ ಹಾಜರಿದ್ದಾರೆ.
ಸರ್ಕಾರ ರಚಿಸಲು ಬೇಕಾಗಿರುವುದು ಮ್ಯಾಜಿಕ್ ಸಂಖ್ಯೆ 110. ಕಾಂಗ್ರೆಸ್ 78 ಮತ್ತು ಜೆಡಿಎಸ್ 36 ಮೈತ್ರಿಯಲ್ಲಿ ಒಟ್ಟು ಸಂಖ್ಯಾಬಲ; 117. ಬಿಜೆಪಿ 104 ಒಟ್ಟು ಸಂಖ್ಯೆಯನ್ನು ಹೊಂದಿದೆ. ಬಿಜೆಪಿ ವಿಶ್ವಾಸ ಮತ ಸಾಬೀತು ಪಡಿಸಬೇಕಾದರೆ ಕಾಂಗ್ರೆಸ್–ಜೆಡಿಎಸ್ನ 8 ರಿಂದ 10 ಶಾಸಕರು ಅಡ್ಡ ಮತದಾನ ಮಾಡಬೇಕು. ಆಗ ಬಿಜೆಪಿ ಬಲ 112ರಿಂದ 114ಕ್ಕೆ ಏರಲಿದೆ.