ಕೋವಿಡ್ ನಿರ್ಬಂಧನೆಗಳ ಬಳಿಕ ಮತ್ತೆ ಮೇಕೆದಾಟು ಪಾದಯಾತ್ರೆ ಪ್ರಾರಂಭಿಸಿದ ಕಾಂಗ್ರೆಸ್ ಇಂದು ಬಿಡದಿಯಿಂದ ಬೆಂಗಳೂರಿಗೆ ಬರಲಿದೆ. ಇಂದು ಮಧ್ಯಾಹ್ನ ರಾಜ್ ಕುಮಾರ್ ಫಾರಂನಲ್ಲಿ ಊಟ ಮುಗಿಸಿ ಕೆಂಗೇರಿ ಮೂಲಕ ಬೆಂಗಳೂರಿಗೆ ಪಾದಯಾತ್ರೆ ಎಂಟ್ರಿಯಾಗಲಿದೆ.
ಭೋಜನದ ನಂತರ ಕೆಲ ಹೊತ್ತು ವಿಶ್ರಾಂತಿ ಪಡೆಯಲಿರುವ ಕಾಂಗ್ರೆಸ್ ನಾಯಕರು, ರಾತ್ರಿ ವೇಳೆಗೆ ಕೆಂಗೇರಿ ತಲುಪಲಿದ್ದಾರೆ.
ರಾತ್ರಿ ಕೆಂಗೇರಿಯ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಲ್ಲಿ ರಾತ್ರಿ ಆಹಾರ ಸೇವಿಸಿ ಸಭೆ ನಡೆಸಲಿದ್ದಾರೆ. ರಾತ್ರಿ ಅಲ್ಲೇ ತಂಗಲಿದ್ದಾರೆ.