ಕಸ್ತೂರಿ ನಗರದ 2ನೇ ಮುಖ್ಯ ರಸ್ತೆಯಲ್ಲಿ ಅಪಘಾತ ನಡೆದಿತ್ತು. ಅಪಘಾತ ಬಳಿಕ ಕೇಸ್ ದಾಖಲಿಸಿ ತನಿಖೆ ನಡೆಸಿದ ಕೆ ಆರ್ ಪುರ ಟ್ರಾಫಿಕ್ ಪೊಲೀಸರು ಕಾರು ಮತ್ತು ಚಾಲಕನ ಪತ್ತೆಗೆ ತೀವ್ರ ಶೋಧ ನಡೆಸಿದ್ದರು. ಸುಮಾರು 59 ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿ, ಕಾರು ಮತ್ತು ಚಾಲಕನ ಚಲನವಲನಗಳನ್ನು ಗಮನಿಸಲಾಗಿತ್ತು. ಎಚ್ಎಎಲ್ ನಿವೃತ್ತ ಉದ್ಯೋಗಿ ಶ್ರೀಧರ್ ಎಂಬುವರಿಂದ ಅಪಘಾತವಾಗಿದ್ದು, ಆ ವೇಳೆ ಭಾರಿ ಮಳೆಯಿದ್ದರಿಂದ ಕಾರು ನಿಲ್ಲಿಸದೆ ಹೋಗಿದ್ದರು. ಸದ್ಯ ಶ್ರೀಧರ್ ಮತ್ತು ಕಾರು ಪತ್ತೆ ಹಚ್ಚಿ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಎಸಗಿ ಪರಾರಿ, ಬಲೆ ಬೀಸಿ ಯಶಸ್ವಿಯಾದ ಪೊಲೀಸ್
Photo Credit :
ಬೆಂಗಳೂರು: ಅಪಘಾತವೆಸಗಿ ಪರಾರಿಯಾಗಿದ್ದ ಕಾರು ಚಾಲಕನನ್ನು ಅರೆಸ್ಟ್ ಮಾಡಲಾಗಿದೆ. ಕಾರು ಚಾಲಕ ಶ್ರೀಧರ್ ಎಂಬುವವರನ್ನು ಬಂಧಿಸಲಾಗಿದ್ನದು, ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ K.R.ಪುರ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲು ದಾಖಲಾಗಿದೆ. ಸೆಪ್ಟೆಂಬರ್ 21ರಂದು ನಡೆದಿದ್ದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ, ಗಂಭೀರ ಗಾಯಗೊಂಡಿದ್ದ ಪಾದಚಾರಿಯೋರ್ವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.