News Karnataka Kannada
Monday, April 29 2024
ಬೆಂಗಳೂರು ನಗರ

ವೈಯಕ್ತಿಕ ಕಾರಣಕ್ಕೆ ಐಪಿಎಸ್ ಅಧಿಕಾರಿ ಡಿ. ಕೆ. ರವಿ ಆತ್ಮಹತ್ಯೆಗೆ ಶರಣಾದರು : ಮಾಜಿ ಸಿಎಂ ಸಿದ್ದರಾಮಯ್ಯ

Siddaramaiah Bang 17 6 21 No 176218 Newsk 3471785224
Photo Credit :

ಬೆಂಗಳೂರು : ಆರು ವರ್ಷಗಳ ಹಿಂದೆ ತೀವ್ರ ಸಂಚಲನ ಮೂಡಿಸಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಆತ್ಮಹತ್ಯೆ ಪ್ರಕರಣ ಪುಸ್ತಕ ರೂಪ ಪಡೆದುಕೊಂಡಿದೆ.

ರವಿ ಅವರ ವೃತ್ತಿ, ವಯಕ್ತಿಕ ಬದುಕು, ಮಹಿಳಾ ಅಧಿಕಾರಿಯೊಂದಿಗಿನ ಒಡನಾಟ ಸೇರಿ ಪುಸ್ತಕದಲ್ಲಿರುವ ಅನೇಕ ವಿಚಾರಗಳು ಮತ್ತೊಮ್ಮೆ ಚರ್ಚೆ ಹುಟ್ಟು ಹಾಕುವ ಸಾಧ್ಯತೆ ದಟ್ಟವಾಗಿದೆ.

ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ, “ನಗ್ನಸತ್ಯ” ಹಾಗೂ “ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೊಟೇಪ್ಸ್” ಪುಸ್ತಕಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ  ಬಿಡುಗಡೆ ಮಾಡಿ  ಮಾತನಾಡಿದರು.

ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ದಕ್ಷ,‌ ಪ್ರಾಮಾಣಿಕ ಅಧಿಕಾರಿ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಪ್ರಚಾರಪ್ರಿಯರೂ ಆಗಿದ್ದರು. ಅನೇಕ ಮಹತ್ವಾಕಾಂಕ್ಷೆಗಳ ನಡುವೆ ತಮ್ಮ ಜೊತೆಗಾರ್ತಿ ಐಎಎಸ್ ಅಧಿಕಾರಿಯ ನಿಕಟ ಒಡನಾಟದಲ್ಲಿ ಏಕಮುಖ ಪ್ರೀತಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡರು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ರವಿ ಅವರಿಗೆ ತಮ್ಮ ಕೆಲಸ ಅಷ್ಟಾಗಿ ಖುಷಿ ಕೊಟ್ಟಿರಲಿಲ್ಲ. ಕೋಲಾರದಲ್ಲಿ ಡಿಸಿಯಾಗಿಯೇ ಮುಂದುವರಿಯುವ ಇಚ್ಛೆ ಇತ್ತು. ಆದರೆ, ಅವರ ಮಾವ ಹನುಮಂತರಾಯಪ್ಪ, ರಮೇಶ್ ಕುಮಾರ್ ಅವರ ಕೋರಿಕೆಯ ಮೇರೆಗೆ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದೆ. ಆದರೆ, ಅವರು ಕಾನೂನು ರೀತಿಯಲ್ಲಿ ಅಪಾರ ಹಣ ಸಂಪಾದಿಸಿ, ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು, ಉದ್ಯಮಿಯಾಗಿ ಹೆಸರು ಮಾಡಬೇಕೆಂಬ ಆಸೆ ಹೊಂದಿದ್ದರು. ಅದು ಸಾಧ್ಯವಾಗಲಿಲ್ಲ.

ಪ್ರಚಾರ ಮತ್ತು ಜನಪ್ರಿಯತೆಯ ಮಧ್ಯದಲ್ಲೇ ಅವರು ಭೂ-ಮರಳು ಮಾಫಿಯಾ ಮತ್ತು ಏಕಮುಖ ಪ್ರೀತಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದು ಮೂರ್ಖತನದ ಪರಮಾವಧಿ” ಎಂದರು.

“ರವಿ ಸಾವು ಆತ್ಮಹತ್ಯೆ ಎಂಬುದನ್ನು ಸಿಬಿಐ ದೃಢಪಡಿಸಿತು. ಆದರೆ, ಅದಕ್ಕೂ ಮೊದಲೇ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಘಟನೆಯನ್ನು ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸಿತ್ತು. ಬಿಜೆಪಿ ಮತ್ತು ಜೆಡಿಎಸ್ ವಿರೋಧ ಪಕ್ಷಗಳಾಗಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದವು. ಅಂದಿನ ಗೃಹಮಂತ್ರಿಯಾಗಿದ್ದ ಅಲ್ಪಸಂಖ್ಯಾತ  ಸಮುದಾಯಕ್ಕೆ ಸೇರಿದ ಕೆ.ಜೆ. ಜಾರ್ಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಜೀನಾಮೆ ಕೊಡಿಸುವ ಯತ್ನ ಮಾಡಿದರು ಎಂದು ಸಿದ್ದರಾಮಯ್ಯ ಆರೋಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು